CrimeDistricts

ವಿಚ್ಛೇದನ ಕೊಡಲು ಒಪ್ಪದಿದ್ದಕ್ಕೆ ವಿಕೃತಿ; ಪತ್ನಿ ಮನೆಯವರಿಗೆ ಬೆಂಕಿ ಇಟ್ಟ ದುರುಳ..!

ಯಾದಗಿರಿ; ವಿಚ್ಛೇದನ ಕೊಡಲು ಒಪ್ಪದ ಕಾರಣಕ್ಕೆ ಪತ್ನಿಯ ಮನೆಯವರ ವಿರುದ್ಧ ಗಂಡ ಯಮನಂತೆ ವರ್ತಿಸಿದ್ದಾನೆ.  ಸುರಪುರ ತಾಲೂಕಿನ ನಾರಾಯಣಪುರದಲ್ಲಿ ಘಟನೆ ಜರುಗಿದೆ.  ಸಂಚು ರೂಪಿಸಿ ಪತ್ನಿಯ ಇಡೀ ಕುಟುಂಬಕ್ಕೆ ಗಂಡನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ.  ಈ ವೇಳೆ ಗಂಭೀರವಾಗಿ ಗಾಯಗೊಂಡ ಇಬ್ಬರು ಸಾವಿಗೀಡಾಗಿದ್ದು, ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಜಿಲ್ಲೆಯ ರಾಯಚೂರು ಜಿಲ್ಲೆ ಲಿಂಗಸೂಗೂರು ಬಸ್ ಘಟಕದಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿ ಶರಣಪ್ಪ ಈ ಕೃತ್ಯ ಎಸಗಿದ್ದಾರೆ.

Share Post