Districts

ರೋಟರಿ ಚಿತಾಗಾರದಲ್ಲಿ ಹರ್ಷನ ಅಂತ್ಯಕ್ರಿಯೆ-ತಂದೆಯಿಂದ ಅಗ್ನಿಸ್ಪರ್ಶ

ಶಿವಮೊಗ್ಗ: ನಿನ್ನೆ ರಾತ್ರಿ ಭಜರಂಗದಳ ಕಾರ್ಯಕರ್ತ ಹರ್ಷನ ಕಗ್ಗೊಲೆ ನಡೆದಿತ್ತು. ಉದ್ರಿಕ್ತರ ಗುಂಪೊಂದು ಹರ್ಷನನ್ನ ಕೊಲೆ ಮಾಡಿದ್ರು. ಇಂದು ಹರ್ಷನ ಅಂತ್ಯಕ್ರಿಯೆ ನಡೆದಿದೆ. ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಹರ್ಷನ ಅಂತ್ಯಕ್ರಿಯೆ ನಡೆದಿದೆ.

ಆತನ ಚಿತೆಗೆ ತಂದೆ ನಾಗರಾಜ್‌ ಅಗ್ನಿಸ್ಪರ್ಶ ಮಾಡಿದ್ದಾರೆ. ಚಿತಾಗಾರದಲ್ಲಿ ಹರ್ಷನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಮರಾಠಾ ಭಾವಸಾರ ಕ್ಷತ್ರಿಯ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ. ಕಾಳಿ ಸ್ವಾಮೀಜಿ ನೇತೃತ್ವದಲ್ಲಿ ವಿಧಿವಿಧಾನ ನಡೆಯಿತು. ಹರ್ಷನ ತಂದೆ-ಅಕ್ಕನ ಆಕ್ರಂದನ ಮುಗಿಲುಮುಟ್ಟಿದೆ. ನಿನ್ನೆಯಿಂದ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದ್ದು 144ಸೆಕ್ಷನ್‌ ಜಾರಿ ಮಾಡಲಾಗಿದೆ.

Share Post