CrimeDistricts

ಹಾಸನದಲ್ಲಿ ಹಾಡಹಗಲೇ ಗ್ರಾನೈಟ್‌ ಉದ್ಯಮಿ ಕೊಲೆ

ಹಾಸನ; ಹಾಸನದ ಕೈಗಾರಿಕಾ ಪ್ರದೇಶದಲ್ಲಿ ಹಾಡಹಗಲೇ ಉದ್ಯಮಿಯೊಬ್ಬರ ಕೊಲೆಯಾಗಿದೆ. ಗ್ರಾನೈಟ್‌ ಉದ್ಯಮಿ ಕೃಷ್ಣೇಗೌಡ ಎಂಬುವವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಆರೋಪಿಗಳು ಪರಾರಿಯಾಗಿದ್ದಾರೆ.

ಹಾಸನದ ಕೈಗಾರಿಕಾ ಪ್ರದೇಶದಲ್ಲಿ ಕೃಷ್ಣೇಗೌಡ ಗ್ರಾನೈಟ್‌ ಫ್ಯಾಕ್ಟರಿ ಇಟ್ಟಿದ್ದಾರೆ. ಇದರ ಎದುರೇ ಈ ಕೃತ್ಯ ಎಸಗಲಾಗಿದೆ. ಮಾರಕಾಸ್ತ್ರಗಳೊಂದಿಗೆ ಬಂದಿದ್ದ ದುಷ್ಕರ್ಮಿಗಳು, ಕೃಷ್ಣಗೌಡರ ಮೇಲೆ ಏಕಾಏಕಿ ದಾಳಿ ಮಾಡಿ ಸಾಯಿಸಿದ್ದಾರೆ. ಅನಂತರ ಅವರು ಪರಾರಿಯಾಗಿದ್ದಾರೆ. ಹಾಸನ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕೊಲೆಯಾದ ಕೃಷ್ಣೇಗೌಡರು ಮಾಜಿ ಸಚಿವ ರೇವಣ್ಣ ಅವರು ಅತ್ಯಾಪ್ತರು ಎಂದು ತಿಳಿದುಬಂದಿದೆ.

Share Post