Districts

MURDER: ಚಿನ್ನ ತರಲು ಹೋಗುತ್ತಿದ್ದ ವ್ಯಾಪಾರಿ ಕೊಲೆ; 6 ಲಕ್ಷ ನಗದು ದರೋಡೆ

ಕಲಬುರಗಿ : ಚಿನ್ನದ ವ್ಯಾಪಾರಿಗೆ ಆಸಿಡ್‌ ಕುಡಿಸಿ, ರಾಡ್‌ನಿಂದ ಹೊಡೆದು ಕೊಲೆ ಮಾಡಲಾಗಿದ್ದು, ನಂತರ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿ ಚಿತ್ತಾಪುರ ತಾಲ್ಲೂಕಿನ ರಾವೂರ್‌ ಕ್ರಾಸ್‌ನಲ್ಲಿ ಈ ಕೃತ್ಯ ಎಸಗಲಾಗಿದೆ. ವಿಜಯ್‌ ಕುಮಾರ್‌ ಶೀಲವಂತ ಕೊಲೆಯಾದ ದುರ್ದೈವಿಯಾಗಿದ್ದಾರೆ.

   ಕಲಬುರಗಿ ನಿವಾಸಿಯಾದ ವಿಜಯ್‌ ಕುಮಾರ್‌ ಚಿನ್ನಾಭರಣ ತರಲು ಹಲಕರ್ಟಿ ಗ್ರಾಮಕ್ಕೆ ಹೋಗುತ್ತಿದ್ದರು. ಅವರ ಬಳಿ ಆರು ಲಕ್ಷ ರೂಪಾಯಿ ನಗದು ಇದೆ ಎಂದು ಗೊತ್ತಾಗಿದ್ದರಿಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ರಾವೂರ್‌ ಕ್ರಾಸ್‌ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು ಹಣ ಹಾಗೂ ಚಿನ್ನಾಭರಣ ದೋಚಿದ್ದಾರೆ. ಇದೇ ವೇಳೆ ವಿಜಯ್‌ಕುಮಾರ್‌ಗೆ ಆಸಿಡ್‌ ಕುಡಿಸಲಾಗಿದ್ದು, ನಂತರ ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾರೆ.

ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ವಾಡಿ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Share Post