Districts

ಅಪಘಾತದಲ್ಲಿ ಅಣ್ಣ ಸಾವು; ಹೃದಯಾಘಾತಕ್ಕೆ ಸಹೋದರಿ ಬಲಿ

ಮೈಸೂರು: ಹುಣಸೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದ. ಹೀಗಾಗಿ ಅಣ್ಣನ ಮೃತದೇಹ ನೋಡಲು ಬಂದಿದ್ದ ಸಹೋದರಿಗೆ ತೀವ್ರ ಆಘಾತವಾಗಿದೆ. ಅಣ್ಣನ ದೇಹ ನೋಡುತ್ತಿದ್ದ ಸಹೋದರಿಗೆ ಹೃದಯಾಘಾತವಾಗಿದ್ದು, ಆಕೆ ಕೂಡಾ ಮೃತಪಟ್ಟಿರುವ ಮನಕಲಕುವ ಘಟನೆ ನಡೆದಿದೆ.

    21 ವರ್ಷದ ರಶ್ಮಿ ಮೃತ ಯುವತಿ. ಕೊಡಗಿನ ಪೊನ್ನಂಪೇಟೆ ಮೂಲದ ರಶ್ಮಿ, ಮೈಸೂರಿನಲ್ಲಿ ಬಿಕಾಂ ಓದುತ್ತಿದ್ದರು. ಅವರ ದೊಡ್ಡಪ್ಪನ ಮಗ ಕೀರ್ತಿರಾಜ್‌ ಸೋಮವಾರ ರಾತ್ರಿ ಹುಣಸೂರು ಬಳಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.

ಹುಣಸೂರು ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಕೀರ್ತಿರಾಜ್‌ ಮೃತದೇಹ ಇಡಲಾಗಿತ್ತು. ಇದನ್ನು ನೋಡಿ ಬಂದಿದ್ದ ರಶ್ಮಿ, ಅಣ್ಣನ ಮೃತದೇಹ ನೋಡುತ್ತಿದ್ದಂತೆ ಆಘಾತದಿಂದ ಕುಸಿದುಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

Share Post