DistrictsPolitics

ಮಾಜಿ ಅಶ್ವತ್ಥ್‌ನಾರಾಯಣ್‌ರನ್ನು ನೇಣಿಗೆ ಹಾಕಬೇಕು; ವೀರಪ್ಪ ಮೊಯ್ಲಿ ವಿವಾದಿತ ಹೇಳಿಕೆ

ಚಿಕ್ಕಬಳ್ಳಾರ; ಮಾಜಿ ಸಚಿವ ಸಿ.ಎನ್‌.ಅಶ್ವತ್ಥ್‌ನಾರಾಯಣ್‌ ಅವರನ್ನು ನೇಣಿಗೆ ಹಾಕಬೇಕು ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ನಾಲಗೆ ಹರಿಬಿಟ್ಟಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಅಶ್ವತ್ಥನಾರಾಯಣ್‌ ಅವರು ಸಚಿವರಾಗಿದ್ದಾಗ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ ಎಂದು ಜರಿದಿದ್ದಾರೆ.

ಬಿಜೆಪಿ ಸರ್ಕಾರ ಇದ್ದಾಗ 41 ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರನ್ನೇ ನೇಮಕ ಮಾಡಿಲ್ಲ ಎಂದು ಆರೋಪಿಸಿರುವ ವೀರಪ್ಪ ಮೊಯ್ಲಿ, ಇದರಿಂದಾಗಿ ಶೈಕ್ಷಣಿಕ ವ್ಯವಸ್ಥೆ ಹಾಳಾಗಿದೆ. ಸರ್ಕಾರಿ ವಿವಿಗಳ ವಿದ್ಯಾರ್ಥಿಗಳ ಗುಣಮಟ್ಟದ ಬಗ್ಗೆಯೇ ಬೇರೆಯವರು ಅನುಮಾನಪಡುವಂತಾಗಿದೆ ಎಂದು ಕಿಡಿಕಾರಿದ್ದಾರೆ. ಅಶ್ವತ್ಥನಾರಾಯಣ್‌ ಅವರು ಶಿಕ್ಷಣದ ಹೆಸರಲ್ಲಿ ರಾಜಕೀಯ ಮಾಡಿದ್ದಾರೆ. ಅಷ್ಟು ಬಿಟ್ಟು ಬೇರೇನೂ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

 

Share Post