CrimeDistricts

ಮಾಲೂರಿನ ಇಟ್ಟಿಗೆ ಫ್ಯಾಕ್ಟರಿ ಮಾಲೀಕನ ಅಪಹರಣ; 5 ಕೋಟಿ ರೂ.ಗೆ ಡಿಮ್ಯಾಂಡ್‌

ಕೋಲಾರ; ಕೋಲಾರ ಜಿಲ್ಲೆ ಮಾಲೂರಿನ ಇಟ್ಟಿಗೆ ಫ್ಯಾಕ್ಟರಿ ಮಾಲೀಕನನ್ನು ದುಷ್ಕರ್ಮಿಗಳು ಅಪಹರಣ ಮಾಡಿದ್ದು, ಜೀವಂತವಾಗಿ ಬಿಡುಡಗೆ ಮಾಡಲು 5 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ. ಮಾಲೂರಿನ ಮಾರುತಿನಗರದ ನಿವಾಸಿ ಬಾಬು ಎಂಬುವವರೇ ಅಪಹರಣವಾಗಿರುವ ಉದ್ಯಮಿಯಾಗಿದ್ದು, ಪೊಲೀಸರು ದುಷ್ಕರ್ಮಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ದುಷ್ಕರ್ಮಿಗಳು ಇಟ್ಟಿಗೆ ಬೇಕು ಎಂದು ಕರೆ ಮಾಡಿದ್ದಾರೆ. ಮಾಲೂರು ಬಳಿಯ ಇಟ್ಟಿಗೆ ಫ್ಯಾಕ್ಟರಿಗೆ ಕರೆಸಿಕೊಂಡಿದ್ದಾರೆ. ನಂತರ ಅಲ್ಲಿಂದ ಬಾಬು ಅವರನ್ನು ಕಿಡ್ನ್ಯಾಪ್‌ ಮಾಡಿದ್ದಾರೆ. ನಂತರ ಬಾಬು ಅವರ ಕುಟುಂಬಸ್ಥರಿಗೆ ಕರೆ ಮಾಡಿ ಐದು ಕೋಟಿ ರೂಪಾಯಿ ಒತ್ತೆ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಕಳೆದ ಬುಧವಾರ ಈ ಕಿಡ್ಯ್ನಾಪ್‌ ಆಗಿದೆ. ಸದ್ಯ ಬಾಬು ಪತ್ನಿಗೆ ಕಾಲು ಆಪರೇಷನ್‌ ಆಗಿದೆ. ಮಗ ಮಂಜುನಾಥ್‌ಗೆ ಪೆರಾಲಿಸಿಸ್‌ ಆಗಿ ಬಳಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೇ ದುಷ್ಕರ್ಮಿಗಳು ಬಾಬು ಅವರನ್ನು ಅಪಹರಿಸಿದ್ದಾರೆ. ಇದರಿಂದಾಗಿ ಅವರ ಕುಟುಂಬ ಕಣ್ಣೀರು ಹಾಕುತ್ತಿದೆ. ಮಾಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೂರು ತಂಡಗಳನ್ನು ರಚಿಸಿಕೊಂಡು ದುಷ್ಕರ್ಮಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

 

Share Post