Districts

ಅರಮನೆ ನಗರಿಯಲ್ಲಿ ಪುಷ್ಪ ಪ್ರದರ್ಶನ

ಮೈಸೂರು: ಅರಮನೆ ನಗರಿ ಆವರಣದಲ್ಲಿ ಆಯೋಜಿಸಿರುವ ಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್‌ ಚಾಲನೆ ನೀಡಿದರು. ಈ ಪ್ರದರ್ಶನ ಜ.೨ರ ವರೆಗೆ ಇರಲಿದೆ. ಸಾರ್ವಜನಿಕರಿಗೆ ಬೆಳಗ್ಗೆ ೧೦ ರಿಂದ ೮.೩೦ ವರೆಗೆ ವೀಕ್ಷಣೆ ಅವಕಾಶ ಕಲ್ಪಿಸಲಾಗಿದೆ.
ಅಯೋಧ್ಯಯಲ್ಲಿ ನಿರ್ಮಾಣವಾಗಿರುವ ರಾಮಮಂದಿರದ ಪ್ರತಿಕೃತಿ ಈ ಪ್ರದರ್ಶನದ ಪ್ರಮುಖ ಆಕರ್ಷಣೆ ಅನಿಸಿದೆ. ಇತ್ತೀಚೆಗೆ ನಿಧನರಾದ ಸೇನಾಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ , ನಟ ಪುನೀತ್‌ ರಾಜ್‌ ಕುಮಾರ್‌ ಅವರ ಪ್ರತಿಕೃತಿಯೂ ಇದೆ.
ನೇಗಿಲು ಹೊತ್ತ ರೈತ, ಆನೆಗಳ ಖೆಡ್ಡಾ ಕಾರ್ಯಾಚರಣೆ , ಹೂವಿನ ಪಲ್ಲಕ್ಕಿ, ಜಯಚಾಮರಾಜ ಒಡೆಯರ್‌ , ಚಾಮುಂಡೇಶ್ವರಿ, ಮಹಿಷಾಸುರ, ನಂದಿ ವಿಗ್ರಹದ ಪ್ರತಿಕೃತಿಗಳೂ ಗಮನ ಸೆಳೆಯುತ್ತಿವೆ. ಒನಕೆ ಓಬವ್ವ, ನೀರಜ್‌ ಚೋಪ್ರಾ ಪ್ರತಿಕೃತಿಗಳೂ ಇವೆ. ಜೊತೆಗೆ ಮಕ್ಕಳಿಗಾಗಿ ಹೂವಿನಲ್ಲಿ ಟಾಮ್‌ ಅಂಡ್‌ ಜರಿ ಪ್ರತಿಕೃತಿ ರೂಪಿಸಲಾಗಿದೆ. ಪುಷ್ಪ ಪ್ರದರ್ಶನದ ಜೊತೆಗೆ ಗೊಂಬೆಗಳ ಪ್ರದರ್ಶನ ಮತ್ತು ಛಾಯಾಚಿತ್ರ ಏರ್ಪಡಿಸಲಾಗಿದೆ.

 

Share Post