Districts

ಪುಟ್ಟ ಮಕ್ಕಳು ಸೇರಿ ಐವರನ್ನು ಕೊಲೆ ಮಾಡಿದ್ದ ಮಹಿಳೆ ಅರೆಸ್ಟ್‌

ಮಂಡ್ಯ: ಪ್ರಿಯಕರನನ್ನು ದಕ್ಕಿಸಿಕೊಳ್ಳಲು ಆತನ ಪತ್ನಿ ಹಾಗೂ ಮಕ್ಕಳನ್ನು ಕೊಲೆ ಮಾಡಿದ್ದ ಮಹಿಳೆಯನ್ನು ಕೆಆರ್‌ಎಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪೊಲೀಸರು ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣವನ್ನು ಎರಡನೇ ದಿನದಲ್ಲಿ ಭೇಧಿಸಿದ್ದಾರೆ.

  ಎರಡು ದಿನದ ಹಿಂದೆ ಕೆಆರ್‌ಎಸ್ ಗ್ರಾಮದ ಬಜಾರ್ ಲೈನ್ ನಿವಾಸಿ ಗಂಗರಾಮ್ ಪತ್ನಿ ಲಕ್ಷ್ಮಿ(30), ಮಕ್ಕಳಾದ ರಾಜ್ (12) ಕೋಸಮಲ್ (7), ಕುನಾಲ್(5) ಹಾಗೂ ಅಣ್ಣನ ಮಗ ಗೋವಿಂದ್(12) ಎಂಬುವರ ಕೊಲೆ ನಡೆದಿತ್ತು. ರಾತ್ರಿ ಉಂಡು ಮಲಗಿದವರು ಬೆಳಗ್ಗೆ ಶವಗಳಾಗಿ ಪತ್ತೆಯಾಗಿದ್ದರು. ಈ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಶರು ಲಕ್ಷ್ಮೀ ಎಂಬಾಕೆಯನ್ನು ಬಂಧಿಸಿದ್ದಾರೆ.

ಕೊಲೆಯಾದ ಲಕ್ಷ್ಮೀ ಗಂಡ ಗಂಗಾರಾಮ್‌ ಜೊತೆ ಆರೋಪಿ ಲಕ್ಷ್ಮೀ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಆದ್ರೆ, ಗಂಗಾರಾಮ್‌ ನನಗೇ ದಕ್ಕಬೇಕೆಂದು ಹಾತೊರೆಯುತ್ತಿದ್ದ ಆರೋಪಿ ಲಕ್ಷ್ಮೀ ಈ ಕೃತ್ಯ ಎಸಗಿದ್ದಾಳೆ. ಗಂಗಾರಾಮ್‌ ಇಲ್ಲದ ದಿನ ಅವರ ಮನೆಗೆ ಹೋಗಿ, ಗಂಗಾರಾಮ್‌ ಪತ್ನಿ ಜೊತೆ ಊಟವನ್ನೂ ಮಾಡಿದ್ದಾಳೆ. ರಾತ್ರಿ ಅಲ್ಲಿಯೇ ಮಲಗಿದ್ದಾಳೆ. ಆದ್ರೆ ಎಲ್ಲರೂ ಮಲಗಿದ ಮೇಲೆ ಆಕೆ, ಎಲ್ಲರನ್ನೂ ಸಾಯಿಸಿದ್ದಳು. ನಂತರ ಮುಂಜಾನೆಯೇ ಮೈಸೂರಿಗೆ ತೆರಳಿದ್ದ ಆಕೆ, ನಂತರ ಬಂದು ತನಗೆ ಏನೂ ಗೊತ್ತೇ ಇಲ್ಲವೆಂಬಂತೆ ನಟಿಸಿದ್ದಳು.

ಆರೋಪಿಯ ನಡವಳಿಕೆಯಿಂದ ಪೊಲೀಸರು ಅನುಮಾನಗೊಂಡಿದ್ದರು. ಆಕೆಯನ್ನು ಕರೆದು ವಿಚಾರಣೆ ನಡೆಸಿದಾಗ ಕೃತ್ಯ ನಾನೇ ಮಾಡಿದ್ದೇನೆ ಎಂದು ಆಕೆ ಒಪ್ಪಿಕೊಂಡಿದ್ದಾಳೆ.

 

Share Post