CrimeDistricts

ರೌಡಿ ಶೀಟರ್‌ಗಳ ಜೊತೆ ಸ್ನೇಹ; ಪೊಲೀಸ್‌ ಕಾನ್ಸ್‌ಟೇಬಲ್‌ ಅಮಾನತು

ಮೈಸೂರು; ರೌಡಿ ಶೀಟರ್ ಗಳ ಜೊತೆ ಸೇರಿ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಮೈಸೂರಿನ ಜಯಲಕ್ಷ್ಮಿಪುರಂ ಪೋಲಿಸ್ ಸ್ಟೇಷನ್ ನ ಹೆಡ್ ಕಾನ್ಸ್ಟೇಬಲ್ ಸುರೇಶ್‌ರನ್ನು ನಗರ ಪೋಲಿಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಅಮಾನತು ಮಾಡಿದ್ದಾರೆ.

ಸುರೇಶ್ ಅವರು ಜಯಲಕ್ಷ್ಮಿಪುರಂ ಪೋಲಿಸ್ ಸ್ಟೇಷನ್ ನಲ್ಲಿ ವಿಶೇಷ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ರೌಡಿ ಶೀಟರ್ ಗಳ ಜೊತೆ ಸ್ನೇಹ ಹೊಂದಿದ್ದರು ಎಂಬ ಆರೋಪವಿದೆ. ಮಟ್ಕಾ ದಂಧೆಗಳಲ್ಲಿ ಪ್ರಮುಖನಾಗಿರುವ ಹಾಗೂ ಬುಕ್ಕಿಯಾಗಿ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿ ಅಬ್ದುಲ್ ಜಮೀರ್ ಜೊತೆ ಸುರೇಶ್ ಸಂಪರ್ಕ ಇಟ್ಟುಕೊಂಡಿದ್ದ ಎನ್ನಲಾಗಿದೆ.

ಅಪರಾಧಿ ಚಟುವಟಿಕೆ ಹೊಂದಿದ್ದವರ ಜೊತೆ ಸಂಪರ್ಕ ಹಾಗೂ ಕರ್ತವ್ಯದಲ್ಲಿ ತೀವ್ರ ದುರ್ನಡತೆ ಪ್ರದರ್ಶಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪೋಲಿಸ್ ಶಿಸ್ತು ನಡಾವಳಿಗಳ ನಿಮಯದ ಮೇರೆಗೆ ಸುರೇಶ್ ಅವರನ್ನು ಅಮಾನತು ಮಾಡಿರುವ ಪೋಲಿಸ್ ಆಯುಕ್ತರು ಇಲಾಖಾ ವಿಚಾರಣೆಗೊಳಪಡಿಸಿದ್ದಾರೆ.

Share Post