CrimeDistricts

ಹೇಮಾವತಿ ನದಿಗೆ ಹಾರಿ ಪ್ರಥಮ ದರ್ಜೆ ಗುತ್ತಿಗೆದಾರ ಆತ್ಮಹತ್ಯೆ

ಹಾಸನ; ಹೊಳೇನರಸೀಪುರದ ಪ್ರಥಮ ದರ್ಜೆ ಗುತ್ತಿಗೆದಾರರೊಬ್ಬರು ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆ.ಸತ್ತಾರ್‌ ಎಂಬ 79 ವರ್ಷದ ಗುತ್ತಿಗೆದಾರನೇ ಆತ್ಮಹತ್ಯೆ ಮಾಡಿಕೊಂಡವರು. ಅವರು ನದಿಗೆ ಜಿಗಿಯವ ವಿಡಿಯೋ ಸಿಸಿಟಿವಿಯಲ್ಲಿ ರೆಕಾರ್ಡ್‌ ಆಗಿದೆ.

ಗುತ್ತಿಗೆದಾರ ಸತ್ತಾರ್‌ ಅವರು ಹಲವರಿಗೆ ಹಣ ಸಾಲ ಕೊಟ್ಟಿದ್ದರು. ಆದ್ರೆ ಅದನ್ನು ಸಾಲ ಪಡೆದವರು ಪಾಪಸ್‌ ಕೊಟ್ಟಿಲ್ಲ. ಇದಲ್ಲದೆ ಇತರೆ ವೈಯಕ್ತಿಕ ಕಾರಣಗಳಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.  ನಿನ್ನೆ ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ.

ಹೊಳೆನರಸೀಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸತ್ತಾರ್ ಶೋಧ ಕಾರ್ಯಾಚರಣೆ ವೇಳೆ ಅಪರಿಚಿತನ ಶವವೊಂದು ಪತ್ತೆಯಾಗಿದೆ.

Share Post