CrimeDistricts

ಆಕಸ್ಮಿಕ ಬೆಂಕಿ; ಮ್ಯಾಂಗನಿಸ್‌ ಲಾರಿ ಸುಟ್ಟು ಕರಕಲು

ಕಾರವಾರ; ಇತ್ತೀಚೆಗೆ ಅಪಘಾತಗಳು, ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೇ ರೀತಿ ಕಾರವಾರದ ಬಳಿ ಮ್ಯಾಂಗನೀಸ್‌ ತುಂಬಿದ್ದ ಲಾರಿ ಆಕಸ್ಮಿಕ ಬೆಂಕಿಗೆ ಆಹುತಿಯಾಗಿದೆ. ಯಲ್ಲಾಪುರ ತಾಲ್ಲೂಕಿನ ಗುಳ್ಳಾಪುರ ಸಮೀಪ ಮ್ಯಾಂಗನೀಸ್‌ ಲಾರಿ ಸುಟ್ಟು ಕರಕಲಾಗಿದೆ.

 

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ದುರ್ಘಟನೆ ನಡೆದಿದೆ. ಮ್ಯಾಂಗನೀಸ್‌ ತುಂಬಿದ್ದ ಲಾರಿ ಹೊಸಪೇಟೆಯಿಂದ ಗೋವಾಕ್ಕೆ ತೆರಳುತ್ತಿತ್ತು. ಅರಬೈಲ್ ಘಾಟ್‍ನಲ್ಲಿ ಸಂಚರಿಸುತ್ತಿದ್ದಾಗ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅದು ಸಂಪೂರ್ಣ ಸುಟ್ಟುಹೋಗಿದೆ. ಇದರಿಂದಾಗಿ ಲಾರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮ್ಯಾಂಗನೀಸ್‌ ಕರಗಿಹೋಗಿದೆ.

 

ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಲಾರಿ ಚಾಲಕ ಹಾಗೂ ಇತರರು ಲಾರಿಯಿಂದ ಇಳಿದು ತಮ್ಮ ಪ್ರಾಣವನ್ನು ಕಾಪಾಡಿಕೊ೦ಡಿದ್ದಾರೆ.

 

Share Post