CrimeDistricts

ನಡು ರಸ್ತೆಯಲ್ಲೇ ವ್ಯಕ್ತಿ ಮೇಲೆ ಗುಂಡಿನ ದಾಳಿ; ಕಾರಿನಲ್ಲಿ ಬಂದ ಆಗಂತುಕರು ಯಾರು..?

ಮಂಗಳೂರು; ನಡು ರಸ್ತೆಯಲ್ಲೇ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಸುಳ್ಯ ತಾಲ್ಲೂಕಿನ ಮೊಗರ್ಪಣೆ ಎಂಬಲ್ಲಿ ನಡೆದಿದೆ. 

ಮೊಗರ್ಪಣೆ ಬಳಿ ಮೊಹಮದ್‌ ಎಂಬುವವರು ಕಾರು ಹತ್ತುತ್ತಿದ್ದರು. ಇದೇ ವೇಳೆ ಕಾರಿನಲ್ಲಿ ಆಗಮಿಸಿದ ಆಗಂತುಕರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಆದ್ರೆ ಅದೃಷ್ಟವಶಾತ್‌ ಗುಂಡು ಗುರಿ ತಪ್ಪಿದೆ. ಹೀಗಾಗಿ ಅದು ಕಾರಿನ ಬಾಗಿಲಿಗೆ ಬಡಿದಿದೆ. ಈ ವೇಳ ಗುಂಡಿನ ಚಿಲ್‌ ತಗುಲಿ ಮೊಹಮದ್ ಹೊಟ್ಟೆಗೆ ಗಾಯವಾಗಿದೆ.

ಗಾಯಾಳು ಮೊಹಮದ್‌ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಷರು ತಲಾಷ್‌ ನಡೆಸಿದ್ದಾರೆ.

 

Share Post