Districts

ಕಾಂಗ್ರೆಸ್‌ ಹುಳ ತಿಂದು ಬಿಟ್ಟಿರುವ ಮರ, ಅದಕ್ಕೆ ಗೆದ್ದಲು ಹಿಡಿದಿದೆ: ಈಶ್ವರಪ್ಪ

ಚಿಕ್ಕಮಗಳೂರು: ಕಾಂಗ್ರೆಸ್‌ ನಾಯಕರ ಹೇಳಿಕೆ, ಅವರ ಕಾರ್ಯವೈಖರಿಗೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಮಹದಾಯಿಗಾಗಿ ಪಾದಯಾತ್ರೆ ಮಾಡ್ತಾರಂತೆ ಕಾಂಗ್ರೆಸ್‌ ಅನ್ನು ರಾಜಕೀಯ ಪಕ್ಷ ಅಂತ ಕರೆಯಬೇಕಾ..? ಕಾಂಗ್ರೆಸ್‌ ಪರಿಸ್ಥಿತಿ ಈಗ ಹೇಗಾಗಿದೆ ಅಂದ್ರೆ ಹುಳ ತಿಂದು ಬಿಟ್ಟಿರುವ ಮರದಂತೆ ಕಾಂಗ್ರೆಸ್‌ ಪರಿಸ್ಥಿತಿ ಇದೆ.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್‌ ಮಹಾಪುರುಷರು ಈಗಿಲ್ಲ . ಇಲ್ಲಿರುವವರೆಲ್ಲ ಸ್ವಾರ್ಥಿಗಳು. ಡಿಕೆಶಿ, ಸಿದ್ದರಾಮಯ್ಯನವರ ಮನಸ್ಥಿತಿ ಸ್ವಾರ್ಥದಿಂದ ಕೂಡಿದೆ. ಇವರ ಸ್ವಾರ್ಥಕ್ಕೆ ಏನು ಬೇಕಾದ್ರೂ ಹೇಳ್ತಾರೆ. ವಿಪಕ್ಷ ನಾಯಕನ ಸ್ಥಾನದಿಂದ ಸಿದ್ದರಾಮಯ್ಯನನ್ನು ಕೆಳಗೆ ಇಳಿಸಿದ್ರೆ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಖಂಡಿತವಾಗಿಯೂ ಇರುವುದಿಲ್ಲ. ಅಧಿಕಾರದ ದುರಾಸೆಗಾಗಿ ಏನು ಬೇಕಾದ್ರೂ ಮಾಡ್ತಾರೆ. ಜೆಡಿಎಸ್‌ನಲ್ಲಿ ಅವಕಾಶ ಸಿಕ್ಕಿಲ್ಲ ಎಂದು ಪಕ್ಷವನ್ನೇ ಬಿಟ್ಟರು. ವಿಪಕ್ಷ ನಾಯಕನ ಸ್ಥಾನ ಸಿಗುತ್ತೆ ಎಂದು ಕಾಂಗ್ರೆಸ್‌ಗೆ ಬಂದು ಸೇರಿಕೊಂಡ್ರು.

ಆವತ್ತಿನಿಂದ ಇಲ್ಲಿವರೆಗೂ ಸಿಎಂ ಹಾಗೂ ವಿಪಕ್ಷ ನಾಯಕನ ಸ್ಥಾನದಲ್ಲೇ ಉಳಿದಿದ್ದಾರೆ. ಯಾಕೆ ಕಾಂಗ್ರೆಸ್‌ ಪಕ್ಷದಲ್ಲಿ ಬೇರೆ ಯಾವ ನಾಯಕರೂ ಇಲ್ವಾ..?ರಾಷ್ಟ್ರ ರಾಜಕಾರಣಕ್ಕೆ ಕರೆದ್ರೂ ಸಿದ್ರಾಮಯ್ಯ ಹೋಗಲಿಲ್ಲ. ಈಗ ತಮ್ಮ ಚಟ ತೀರಿಸಿಕೊಳ್ಳುವುದಕ್ಕೆ ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಹಿಗ್ಗಾಮುಗ್ಗ ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ರು.

Share Post