CrimeDistricts

ಚಿನ್ನದಂಗಡಿ ಮಾಲೀಕನಿಂದ ಅಸಭ್ಯ ವರ್ತನೆ; ಯುವತಿಯಿಂದ ಬಿತ್ತು ಭಾರಿ ಗೂಸಾ

ಚಿಕ್ಕಮಗಳೂರು; ಚಿಕ್ಕಮಗಳೂರಿನ ತರೀಕೆರೆಯಲ್ಲಿ ಚಿನ್ನದ ಅಂಗಡಿ ಮಾಲೀಕನೊಬ್ಬ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಅದರಂತೆ ಕೆಲ ದಿನಗಳ ಹಿಂದೆ ಕೂಡಾ ಚಿನ್ನದ ಕೊಳ್ಳಲು ಬಂದಿದ್ದ ಅಪ್ರಾಪ್ತ ಬಾಲಕಿ ಜೊತೆಗೂ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಕಾರಣಕ್ಕಾಗಿ ಆತ ಧರ್ಮದೇಟು ತಿಂದಿದ್ದಾನೆ. ಅದರ ವಿಡಿಯೋ ಈಗ ವೈರಲ್‌ ಆಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಎಂಜಿ ರಸ್ತೆಯಲ್ಲಿ ಚಿನ್ನದಂಗಡಿ ಮಾಲೀಕ ಮಹ್ಮದ್‌ ಅಮೀರ್‌ ಎಂಬಾತನೇ ಧರ್ಮದೇಟು ತಿಂದ ವ್ಯಕ್ತಿ. ಈತ ತನ್ನ ಅಂಗಡಿಗೆ ಬರುವ ಮಹಿಳೆಯರ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ. ನಾಲ್ಕು ದಿನದ ಹಿಂದೆ ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಾಯಿ ಜೊತೆ ಇದೇ ಚಿನ್ನದಂಗಡಿಗೆ ಬಂದಿದ್ದಳು. ಈ ವೇಳೆ ಚಿನ್ನದ ಅಂಗಡಿ ಮಾಲೀಕ ಮಹಮ್ಮದ್ ಅಮೀರ್, ಈ ಬಾಲಕಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.

ಇದನ್ನು ನೋಡಿದ ಬಾಲಕಿಯ ತಾಯಿ ಆತನನ್ನು ಹೊರೆಗೆ ಎಳೆತಂದು ಚೆನ್ನಾಗಿ ಬಡಿದಿದ್ದಾಳೆ. ಚಪ್ಪಲಿಯಿಂದ ಚೆನ್ನಾಗಿ ಥಳಿಸಿದ್ದಾಳೆ. ಈ ಬಗ್ಗೆ ತರೀಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.

 

Share Post