DistrictsPolitics

ಭಗವಂತನ ಇಚ್ಛೆ ಬೇರೆಯೇ ಇದೆ-ನಾನು ಮತ್ತೆ ಸಿಎಂ ಆಗ್ತೀನಿ; ಹೆಚ್‌ಡಿಕೆ ವಿಶ್ವಾಸ

ರಾಮನಗರ; ಡಿ.ಕೆ.ಶಿವಕುಮಾರ್‌ ಒಂದು ಕಡೆ ನನಗೆ ಸಿಎಂ ಸ್ಥಾನಕ್ಕೇರಲು ಬೆಂಬಲ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಇತ್ತ ಹೆಚ್‌.ಡಿ.ಕುಮಾರಸ್ವಾಮಿಯವರು ಕೂಡಾ ನಾನು ಮತ್ತೆ ಸಿಎಂ ಆಗ್ತೀನಿ ಎಂದಿದ್ದಾರೆ. ರಾಮನಗರದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಮತದಾರರು ಮತ್ತೆ ಜೆಡಿಎಸ್‌ ಕೈ ಹಿಡಿಯಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಹಲವಾರು ನಾಯಕರು ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಆದರೆ ಭಗವಂತನ ಇಚ್ಛೆ ಬೇರೆಯೇ ಇದೆ. ನಾನು ಮುಂದಿನ ಸಿಎಂ ಆಗುತ್ತೇನೆ ಎಂದು ಹೆಚ್‌ಡಿಕೆ ವಿಶ್ವಾಸ ವ್ಯಕ್ತಪಡಿಸಿದರು.

Share Post