DistrictsPolitics

ಬಿಜೆಪಿ ರಾಜ್ಯ ಹಾಗೂ ದೇಶಕ್ಕೆ ಕೆಟ್ಟ ಹೆಸರು ತಂದಿದೆ; ಡಿ.ಕೆ.ಶಿವಕುಮಾರ್‌

ಚಿತ್ರದುರ್ಗ; ಬಿಜೆಪಿ ಪಕ್ಷ ದೇಶ ಮತ್ತು ರಾಜ್ಯಕ್ಕೆ ಕೆಟ್ಟ ಹೆಸರು ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಿಡಿ ಕಾರಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು,  ಮೂರು ವರ್ಷಗಳಿಂದ ಅವರಿಗೆ ಏನೂ ಮಾಡಲಿಕ್ಕೆ ಆಗಿಲ್ಲ, ಮುಂದೆಯೂ ಆಗುವುದಿಲ್ಲ ಎಂದರು.
    ಐಟಿ ದಾಳಿ ಮಾಡಿ ಕೇಸ್ ಹಾಕಿದ್ದಾರೆ. ಇದು 40 ಪರ್ಸೆಂಟ್‌ ಕಮಿಷನ್ ಸರ್ಕಾರ. ಲಂಚ, ಮಂಚ ಬಿಜೆಪಿಗೆ ಮೂಲಭೂತ ಬಳುವಳಿ. ಈ ಭ್ರಷ್ಟ ಸರ್ಕಾರವನ್ನು ಮನೆಗೆ ಕಳುಹಿಸಿ ರಾಜ್ಯವನ್ನು ಉಳಿಸುವ ಕೆಲಸ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ಇದೇ ವೇಳೆ ಹೇಳಿದರು. ಜೊತೆಗೆ ರಾಹುಲ್ ಗಾಂಧಿ ಗೋ ಬ್ಯಾಕ್ ಎಂಬ ಬಿಜೆಪಿ ಅಭಿಯಾನಕ್ಕೆ ಟಾಂಗ್ ನೀಡಿದ ಡಿಕೆಶಿ, ಗೋಬ್ಯಾಕ್ ಆದ್ರೂ ಮಾಡಲಿ, ಕಂ ಬ್ಯಾಕ್ ಆದ್ರೂ ಮಾಡಲಿ. ಇದು ಕಾಂಗ್ರೆಸ್ ಪಕ್ಷ ಎಂದು ಟಾಂಗ್​ ನೀಡಿದರು.
Share Post