CrimeDistricts

ಮಾಂಸದ ಉದ್ಯಮ ಶುರು ಮಾಡಿದ್ದೇ ಪ್ರವೀಣ್‌ ಕೊಲೆಗೆ ಕಾರಣವಾಯ್ತಾ..?

ಮಂಗಳೂರು; ಬೆಳ್ಳಾರೆಯಲ್ಲಿ ಮಾಂಸದ ಉದ್ಯಮ ಶುರು ಮಾಡಿದ್ದೇ ಪ್ರವೀಣ್‌ ಅವರ ಕೊಲೆಗೆ ಕಾರಣವಾಯ್ತಾ ಎಂಬ ಅನುಮಾನ ಶುರುವಾಗಿದೆ. ಈ ಬಗ್ಗೆ ಪ್ರವೀಣ್‌ ಅವರ ಸೋದರ ಸಂಬಂಧಿ ರಂಜಿತ್‌ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ರಂಜಿತ್‌, ಪ್ರವೀಣ್‌ ಮಾಂಸದ ಉದ್ಯಮ ಶುರು ಮಾಡಿದ್ದರು. ಹಿಂದೂಗಳು ತಮ್ಮ ಅಂಗಡಿಯಲ್ಲೇ ಮಾಂಸದವನ್ನು ಕೊಂಡುಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. ಮೀನಿನ ಟೆಂಡರ್‌ನ್ನು ಕೂಡಾ ಹಿಂದೂಗಳಿಗೇ ಕೊಡಿಸಿದ್ದರು. ಇದೇ ಜಿದ್ದು ಇಟ್ಟುಕೊಂಡು ಕೊಲೆ ಮಾಡಿರುವ ಅನುಮಾನವಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಕೋಳಿ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಇದಕ್ಕೆ ಪೊಲೀಸರಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

Share Post