CrimeDistricts

ಸಿ.ಪಿ.ಯೋಗೇಶ್ವರ್‌ ಬಾವ ನಾಪತ್ತೆ; ಪತ್ತೆಗೆ ನಾಲ್ಕು ತಂಡ ರಚನೆ

ರಾಮನಗರ; ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರ ಬಾವ ಮಹದೇವಯ್ಯ ನಾಪತ್ತೆಯಾಗಿದ್ದಾರೆ. ಇವರ ಅನುಮಾನಾಸ್ಪದ ನಾಪತ್ತೆ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಅವರ ಪತ್ತೆಗೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಿದ್ದಾರೆ. ಈ ಬಗ್ಗೆ ರಾಮನಗರ ಎಸ್‌ಪಿ ಕಾರಿಕ್‌ ರೆಡ್ಡಿ ಮಾಹಿತಿ ಕೊಟ್ಟಿದ್ದಾರೆ.

ಮಹದೇವಯ್ಯ ಅವರು ನಾಪತ್ತೆಯಾಗಿರುವ ಬಗ್ಗೆ ಅವರ ಪುತ್ರ ಪ್ರಶಾಂತ್ ದೂರು ಕೊಟ್ಟಿದ್ದಾರೆ. ಇದರ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಅವರ ಮೊಬೈಲ್‌ ಲೊಕೇಶನ್‌ ಆಧಾರದ ಮೇಲೆ ಹುಡುಕೋ ಪ್ರಯತ್ನ ನಡೆಯುತ್ತಿದೆ.

ಒಂದು ಬಾರಿ ಅವರ ಮೊಬೈಲ್‌ನಿಂದ ಯಾರೋ ಕರೆ ಸ್ವೀಕರಿಸಿದ್ದಾರೆ. ಅನಂತರ ಅವರ ಮೊಬೈಲ್‌ ನಂಬರ್‌ ಸ್ವಿಚ್ಡ್‌ ಆಫ್‌ ಆಗಿದೆ. ಅವರು ಬಳಸುತ್ತಿದ್ದ ಕಾರು ಕೂಡಾ ಕಾಣೆಯಾಗಿದೆ ಎಂದು ತಿಳಿದುಬಂದಿದೆ.

Share Post