CrimeNationalPolitics

ಒವೈಸಿ ಪ್ರಯಾಣಿಸುತ್ತಿದ್ದ ವಂದೇ ಭಾರತ್‌ ರೈಲಿನ ಮೇಲೆ ಕಲ್ಲು ತೂರಾಟ

ಗಾಂಧೀನಗರ; ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿ ಪ್ರಯಾಣಿಸುತ್ತಿದ್ದ ಎಂಐಎಂ ಮುಖ್ಯಸ್ಥ ಅಸಾದುದ್ದಿನ್‌ ಒವೈಸಿಗೆ ಕಲ್ಲು ತೂರಲಾಗಿದೆ. ಗುಜರಾತ್‌ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪ್ರಚಾರಕ್ಕಾಗಿ ಒವೈಸಿ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಈ ರೈಲಿಗೆ ಕಲ್ಲು ತೂರಲಾಗಿದ್ದು, ರೈಲಿನ ಗಾಜು ಒಡೆದಿದೆ.

ಈ ಬಗ್ಗೆ ಎಂಐಎಂ ಪಕ್ಷದ ವಕ್ತಾರ ವಾರಿಸ್‌ ಎಂಬುವವರು ಟ್ವೀಟ್‌ ಮಾಡಿದ್ದು, ಒವೈಸಿ ಕುಳಿತಿದ್ದ ರೈಲಿನ ಕಂಪಾರ್ಟ್‍ಮೆಂಟ್‍ನ ಕಿಟಿಕಿ ಗಾಜು ಒಡೆದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.ಅಪರಿಚಿತ ವ್ಯಕ್ತಿ ಕಲ್ಲು ತೂರಾಟ ನಡೆಸಿದ್ದಾನೆ ಎಂದು ಬರೆಯಲಾಗಿದೆ.

ಎಂಐಎಂ ನಾಯಕರು ಅಹಮದಾಬಾದ್‍ನಿಂದ ಸೂರತ್‍ಗೆ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಸೂರತ್ ತಲುಪಲು 25 ಕಿಮೀ ಇರುವಾಗ ವ್ಯಕ್ತಿಯೊಬ್ಬ ಕಲ್ಲು ತೂರಿದ್ದಾನೆ.

Share Post