CrimeDistricts

ಉಗ್ರ ಶಾರೀಖ್‌ಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ; 8 ವೈದ್ಯರ ನಿಗಾ

ಮಂಗಳೂರು; ಕುಕ್ಕರ್ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿ ತಾನೇ ತೀವ್ರವಾಗಿ ಗಾಯಗೊಂಡಿರುವ ಉಗ್ರ ಶಾರೀಖ್‌, ಪರಿಸ್ಥಿತಿ ಸ್ವಲ್ಪ ಗಂಭೀರವಾಗಿದೆ. ಹೀಗಾಗಿ ವೆಂಟಿಲೇಟರ್‌ನಲ್ಲಿ ಶಾರೀಖ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತನ ಚೇತರಿಸಿಕೊಂಡರೆ ಉಗ್ರ ಚಟುವಟಿಕೆಯ ಮತ್ತಷ್ಟು ವಿಚಾರಗಳು, ಇದರ ಹಿಂದಿನ ಶಕ್ತಿಗಳ ಬಗ್ಗೆ ಗೊತ್ತಾಗಲಿದೆ. ಈ ಕಾರಣದಿಂದಾಗಿಯೇ ವೈದ್ಯರು ಶಾರೀಖ್‌ಗೆ ಉನ್ನತ ಚಿಕಿತ್ಸೆ ನೀಡುತ್ತಿದ್ದಾರೆ. ಎಂಟು ತಜ್ಞ ವೈದ್ಯರ ೨೪ ಗಂಟೆಯೂ ನಿಗಾ ವಹಿಸಿದ್ದಾರೆ.

ಕುಕ್ಕರ್ ಸ್ಫೋಟದ ವೇಳೆ ದೊಡ್ಡ ಪ್ರಮಾಣದಲ್ಲಿ ಹೊಗೆ ಆವರಿಸಿತ್ತು. ಕುಕ್ಕರ್‌ ಪಕ್ಕವೇ ಆತ ಕುಳಿತಿದ್ದರಿಂದ ಶಾರೀಖ್‌ ಶಾಸ್ವಕೋಶದಲ್ಲಿ ಹೊಗೆ ಸೇರಿಕೊಂಡಿದೆ. ಹೀಗಾಗಿ ಆತನಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಕುಕ್ಕರ್‌ನ ಮುಚ್ಚಳ ಶಾರೀಖ್‌ ಕುತ್ತಿಗೆಗೆ ಬಡಿದಿದೆ. ಇದರಿಂದಾಗಿ ಗಂಭೀರ ಗಾಯವಾಗಿದ್ದು, ಅದಕ್ಕೂ ಚಿಕಿತ್ಸೆ ನೀಡಲಾಗುತ್ತಿದೆ.

 

Share Post