Districts

ಸಾವರ್ಕರ್‌ ಫೋಟೋ ಅಳವಡಿಸಿದ್ದಕ್ಕೆ ಕಾಂಗ್ರೆಸ್‌ ಆಕ್ರೋಶ

ಬೆಳಗಾವಿ; ಸುವರ್ಣ ಸೌಧದಲ್ಲಿ ಸಾವರ್ಕರ್‌ ಫೋಟೋ ಅನಾವರಣಗೊಳಿಸಿರುವುದಕ್ಕೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮೊದಲ ದಿನದ ಚಳಗಾಲದ ಅಧಿವೇಶನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ಶಾಸಕರು ಪ್ರತಿಭಟನೆ ನಡೆಸಿದ್ದಾರೆ.

ಇದೇ ವೇಳೆ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಇದೊಂದು ಪ್ರತಿಭಟನೆಯಲ್ಲ. ಇದೊಂದು ಡಿಮ್ಯಾಂಡ್‌ ಎಂದು ಹೇಳಿದ್ದಾರೆ. ಅನೇಕ ದಾರ್ಶನೀಕರು ಇದ್ದಾರೆ. ದಾರ್ಶನಿಕರ ಫೋಟೋ ಇಡಬೇಕು.  ಅಸೆಂಬ್ಲಿಯಲ್ಲಿ ಇಟ್ಟರೆ ಅದು ಸಭೆಯ ಸ್ವತ್ತಾಗುತ್ತದೆ. ಈ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಬಿಎಸ್ ಸಿ ಮೀಟಿಂಗ್ ನಲ್ಲೂ ಇದು ಚರ್ಚೆ ಆಗಿಲ್ಲ. ಆದರೂ ಭಾವಚಿತ್ರ ಇಡುವ ಕೆಲಸವಾಗಿದೆ.  ಇದಕ್ಕೆ ನನಗೆ ಆಹ್ವಾನ ಕೂಡಾ ನೀಡಿಲ್ಲ ಎಂದು ಆರೋಪಿಸಿದರು.

 

 

Share Post