DistrictsPolitics

ವಿಜಯೇಂದ್ರಗೆ ಟಿಕೆಟ್‌ ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ

ಶಿವಮೊಗ್ಗ; ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರಿಗೆ ನೀವು ಪ್ರೀತಿ ಕೊಟ್ಟಿದ್ದೀರಿ. ಮುಂದಿನ ದಿನಗಳಲ್ಲಿ ವಿಜಯೇಂದ್ರ ಅವರಿಗೂ ಅದೇ ರೀತಿಯ ಪ್ರೀತಿ ತೋರಬೇಕು ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಉಡುತಡಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಹಾಡಿಹೊಗಳಿದರು. ಜೊತೆಗೆ ವಿಜಯೇಂದ್ರಗೆ ಶಿಕಾರಿಪುರದಿಂದ ಟಿಕೆಟ್‌ ಸಿಗುವ ಬಗ್ಗೆ ಸುಳಿವು ಕೊಟ್ಟಿದ್ದಾರೆ.

ಇಂದು ಸ್ವಾರ್ಥ ರಾಜಕಾರಣಿಗಳೇ ಹೆಚ್ಚಿದ್ದಾರೆ. ಅಂತಹವರ ನಡುವೆ ಯಡಿಯೂರಪ್ಪ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ್ದಾರೆ. ಎಲ್ಲಾ ವರ್ಗದವರನ್ನೂ ಸಮನಾಗಿ ಕಂಡಿದ್ದಾರೆ. 12ನೇ ಶತಮಾನದ ನಂತರ ಯಡಿಯೂರಪ್ಪನವರು ಕ್ರಾಂತಿ ಮಾಡಿದ್ದಾರೆ. ಅವರು ಎಂದೂ ನಿವೃತ್ತಿಯಾಗುವುದಿಲ್ಲ ಎಂದು ಸಿಎಂ ಹೇಳಿದರು. ಬಿಎಸ್‌ವೈ ಮಾರ್ಗದರ್ಶನದಲ್ಲಿಯೇ ನಾನು ಮುನ್ನಡೆಯುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

Share Post