CinemaCrimeDistricts

ನಟ ದರ್ಶನ್‌ ಮೇಲೆ ಶೂ ಎಸೆದ ಕಿಡಿಗೇಡಿ; ಹೊಸಪೇಟೆಯಲ್ಲಿ ನಡೆದಿದ್ದೇನು..?

ಹೊಸಪೇಟೆ; ಕ್ರಾಂತಿ ಸಿನಿಮಾದ ಎರಡನೇ ಹಾಡು ಬಿಡುಗಡೆ ವೇಳೆ ಕಿಡಿಗೇಡಿಯೊಬ್ಬ ದರ್ಶನ್‌ ಮೇಲೆ ಶೂ ಎಸೆದಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ. ದರ್ಶನ್‌ ಮೇಲೆ ಶೂ ಎಸೆದಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ವಿಜಯನಗರ ಜಿಲ್ಲೆ ಹೊಸಪೇಟೆ ನಗರದಲ್ಲಿ ನಿನ್ನೆ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಬೊಂಬೆ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮ ಆರಂಭಕ್ಕೂ ಮುನ್ನ ದರ್ಶನ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ನಡುವೆ ಘರ್ಷಣೆ ನಡೆದಿದೆ. ಇದೇ ವೇಳೆ ಕ್ರಾಂತಿ ಸಿನಿಮಾದ ಕಟೌಟ್‌ಗಳನ್ನು ಹರಿದುಹಾಕಲಾಗಿತ್ತು.
ಅನಂತರ ಬಂದ ದರ್ಶನ್‌ ಅವರು ಪುನೀತ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ್ದರು. ಇದಾದ ಮೇಲೆ ಎಲ್ಲವೂ ಸರಿಹೋಯ್ತು ಎಂದು ಹೇಳಲಾಗಿತ್ತು. ಆದ್ರೆ ದರ್ಶನ್‌ ವೇದಿಕೆ ಮೇಲೆ ಬಂದಾಗ ಕಿಡಿಗೇಡಿಯೊಬ್ಬ ಚಪ್ಪಲಿಯನ್ನು ದರ್ಶನ್‌ ಮೇಲೆ ಎಸೆದಿದ್ದಾನೆ. ಇಷ್ಟೆಲ್ಲಾ ಆದರೂ ದರ್ಶನ್‌ ಪರವಾಗಿಲ್ಲ ಬಿಡು ಚಿನ್ನ ಎಂದು ನಗುತ್ತಲೇ ಅದನ್ನು ಸ್ವೀಕಾರ ಮಾಡಿದರು. ಆದ್ರೆ ಅಭಿಮಾನಿಗಳು ಮಾತ್ರ ಈ ಬಗ್ಗೆ ರೊಚ್ಚಿಗೆದ್ದರು.

Share Post