DistrictsPolitics

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಪೋಸ್ಟರ್‌ ವಾರ್‌; ಶ್ಯಾಡೋ ಸಿಎಂ ವ್ಯಂಗ್ಯ ಚಿತ್ರ

ಚಿಕ್ಕಮಗಳೂರು; ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪೋಸ್ಟರ್‌ ಅಭಿಯಾನ ಶುರು ಮಾಡಿದ್ದಾರೆ. ಚಿಕ್ಕಮಗಳೂರಲಿ ತಾಲ್ಲೂಕು ಆಫೀಸ್‌, ಮೆಸ್ಕಾಂ ಕಚೇರಿ ಸೇರಿದಂತ ಹಲವು ಸರ್ಕಾರಿ ಕಚೇರಿಗಳ ಮೇಲೆ ಸರ್ಕಾರ, ಸಿಎಂ ಹಾಗೂ ಸಚಿವರ ವಿರುದ್ಧದ ಪೋಸ್ಟರ್‌ಗಳನ್ನು ಅಂಟಿಲಾಗಿದೆ.

ಶ್ಯಾಡೋ ಸಿಎಂ ಎಂಬ ವ್ಯಂಗ್ಯ ಚಿತ್ರದ ಪೋಸ್ಟರ್‌, ಇಂದನ ಸಚಿವರು ಕಾಣೆಯಾಗಿದ್ದಾರೆ ಎಂಬ ಪೋಸ್ಟರ್‌ಗಳು ಚಿಕ್ಕಮಗಳೂರಿನಾದ್ಯಂತ ಅಂಟಿಸಲಾಗಿದೆ.  ಇಂಧನ ಸಚಿವ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಜೆ ಜಾರ್ಜ್ ವಿರುದ್ಧ ಪೋಸ್ಟರ್‌ ಅಂಟಿಸಲಾಗಿದ್ದು, ರಾಜ್ಯವನ್ನು ಕತ್ತಲೆಗೆ ದೂಡಿ ಸಚಿವರು ನಾಪತ್ತೆಯಾಗಿದ್ದಾರೆ ಎಂದು ಅದರಲ್ಲಿ ಬರೆಯಲಾಗಿದೆ.

ಪಂಚ ಗ್ಯಾರೆಂಟಿಗಳ ಬಗ್ಗೆಯೂ ಕಾರ್ಟೂನ್‌ ತಯಾರಿಸಿ, ಅದರ ಪೋಸ್ಟರ್‌ಗಳನ್ನು ಕೂಡಾ ಅಂಟಿಸಲಾಗಿದೆ.

 

Share Post