CrimeDistricts

ಬೈಕ್‌ ಮೇಲೆ ತೆರಳುತ್ತಿದ್ದವರ ಮೇಲೆ ಗುಂಡಿನ ದಾಳಿ; ಇಬ್ಬರ ದುರ್ಮರಣ

ಚಿಕ್ಕಮಗಳೂರು; ಗುಂಡಿನ ದಾಳಿ ನಡೆಸಿ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರನ್ನು ಕೊಲೆ ಮಾಡಿರುವ ಘಟನೆ ಬಾಳೆಹೊನ್ನೂರು ಸಮೀಪದ ಬಿದರೆ-ಚಂದುವಳ್ಳಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಪ್ರಕಾಶ್ (30) ಹಾಗೂ ಪ್ರವೀಣ್ (33) ಎಂದು ಗುರುತಿಸಲಾಗಿದೆ.

ರಮೇಶ್‌ ಎಂಬಾತ ಈ ಗುಂಡಿನ ದಾಳಿ ನಡೆಸಿದ್ದು, ಆತ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ. ಆರೋಪಿ ರಮೇಶ್ ಹಾಗೂ ಕೊಲೆಯಾದ ಪ್ರಕಾಶ್, ಪ್ರವೀಣ್ ಮೂವರು ಸಂಬಂಧಿಗಳು. ಆರೋಪಿ ರಮೇಶ್‌ ಮಾನಸಿಕ ಅಸ್ವಸ್ಥನಾಗಿದ್ದು, ಆತನಿಗೆ ಬಂದೂಕು ಎಲ್ಲಿಂದ ಸಿಕ್ತು ಅನ್ನೋದರ ಬಗ್ಗೆ ಅನುಮಾನ ಮUಡಿದೆ.

ಮಲೆನಾಡು ಭಾಗದಲ್ಲಿ ಬೆಳೆ ಹಾಗೂ ಕಾಡುಪ್ರಾಣಿಗಳಿಂದ ಪ್ರಾಣ ರಕ್ಷಣೆಗೆ ಬೆಳೆಗಾರರು ಗನ್ ಇಟ್ಟುಕೊಂಡಿರುತ್ತಾರೆ. ಅದೇ ಬಂದೂಕಿನಿಂದ ದಾಳಿ ನಡೆಸಿರಬಹುದು ಎಂದು ಹೇಳಲಾಗುತ್ತಿದೆ. ಘಟನೆಗೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿರುವ ಬಾಳೆಹೊನ್ನೂರು ಪೊಲೀಸರು ಆತ ನಿಜಕ್ಕೂ ಮಾನಸಿಕ ಅಸ್ವಸ್ಥನಾ, ಗುಂಡಿನ ದಾಳಿ ಹಿಂದೆ ಬೇರೆ ಕಾರಣ ಇದ್ಯಾ, ಸಂಬಂಧಿಕರ ಮಧ್ಯೆ ಬೇರ‍್ಯಾವುದಾದರೂ ಕಾರಣಕ್ಕೆ ಮನಸ್ತಾಪ ಇತ್ತಾ ಎಂಬೆಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.

Share Post