DistrictsPolitics

ಅಂಬೇಡ್ಕರ್‌ ಹೆಸರಿನ ಮುಂದೆ ಸಂವಿಧಾನ ಶಿಲ್ಪಿ ಪದ ತೆಗೆದಿರುವುದು ತಪ್ಪು; ಬಸವರಾಜ ಹೊರಟ್ಟಿ

ಕಾರವಾರ; ಪಠ್ಯಪುಸ್ತಕದಲ್ಲಿ ಅಂಬೇಡ್ಕರ್‌ ಅವರ ಹೆಸರಿನ ಮುಂದೆ ಸಂವಿಧಾನ ಶಿಲ್ಪಿ ಎಂಬ ಪದ ತೆಗೆದಿರುವುದು ತಪ್ಪು ಎಂದು ವಿಧಾನಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿ.ಜೆ.ಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಕಾರವಾರದಲ್ಲಿ ಮಾತನಾಡಿದ ಅವರು, ಸಾವಿತ್ರಿಬಾಯಿ ಫುಲೆ ಪಾಠವನ್ನು ತೆಗೆದಿರುವುದು ಕೂಡಾ ಸರಿಯಲ್ಲ. ಇದು ಯಾರೇ ಮಾಡಿದ್ದರೂ ತಪ್ಪಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಠ್ಯಪುಸ್ತಕ ಪರಿಷ್ಕರಣೆಯ ಗಲಾಟೆ ನಡೆಯುತ್ತಿರುವುದು ಕೇವಲ ರಾಜಕೀಯಕ್ಕಾಗಿ ಅಷ್ಟೇ. ಎಲ್ಲರೂ ಕೂಡಾ ರಾಜಕೀಯ ಮಾಡುತ್ತಿದ್ದಾರೆ. ಶಿಕ್ಷಣದ ವಿಷಯದಲ್ಲಿ ವಿವಾದ ಮಾಡಬಾರದು. ಆರ್.ಎಸ್.ಎಸ್ ಸಂಸ್ಥಾಪಕ ಹೆಡ್ಗೇವಾರ್ ಅವರ ಬಗ್ಗೆ ಪಾಠ ಸೇರಿಸಿದ್ದರಿಂದ ಮಕ್ಕಳಲ್ಲಿ ಕೋಮು ಭಾವನೆ ಬೆಳೆಯುತ್ತದೆ ಎಂಬುದು ಸುಳ್ಳು. ನಾನು ಅದನ್ನು ಒಪ್ಪುವುದಿಲ್ಲ ಎಂದು ಹೊರಟ್ಟಿ ಹೇಳಿದ್ದಾರೆ.

Share Post