Districts

ಅನ್ಯಕೋಮಿನ ಯುವತಿ ಜೊತೆ ಮದುವೆ; ಬಾಗಲಕೋಟೆಯಲ್ಲಿ ಹೈಡ್ರಾಮಾ

ಬಾಗಲಕೋಟೆ; ಅನ್ಯಕೋಮಿನ ಯುವತಿ ಜೊತೆ ಹಿಙದೂ ಯುವಕ ಮದುವೆಯಾಗಿದ್ದು, ಈ ವಿಚಾರವಾಗಿ ರಾತ್ರಿ ಹೈಡ್ರಾಮಾ ನಡೆದಿದೆ.. ಪೊಲೀಸರು ಜೋಡಿಗೆ ರಕ್ಷಣೆ ನೀಡಲು ಹಿಂದೇಟು ಹಾಕಿದರೆಂದು ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ.. ಇದೇ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆಯೂ ನಡೆದಿದೆ.

  ಬಾದಾಮಿ ಮೂಲದ ಯುವತಿ ಹಾಗೂ ಮಹಾಂತೇಶ್ ಎಂಬ ಯುವಕ ಮದುವೆಯಾಗಿದ್ದಾರೆ. ಅನಂತರ ಇವರು ರಕ್ಷಣೆ ಕೋರಿ ಬಾಗಲಕೋಟೆ ಎಸ್ ಪಿ ಕಚೇರಿಗೆ ಆಗಮಿಸಿದ್ದಾರೆ. ಈ ವೇಳೆ ಪೊಲೀಸರು ರಕ್ಷಣೆ ನೀಡಲು ಹಿಂದೇಟು ಹಾಕಿದ್ದಾರೆ ಎಂದು ತಿಳಿದುಬಂದಿದೆ..

   ಬಾಗಲಕೋಟೆಯ ನವನಗರ ಠಾಣೆ ಸಿಪಿಐ ರಾಮಣ್ಣ ಬಿರಾದಾರ ವಿರುದ್ಧ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು, ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.

ಲಾಠಿ ಚಾರ್ಜ್ ಮಾಡ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಮತ್ತಷ್ಚು ಉದ್ರಿಕ್ತರಾಗಿ ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ಹಿಂದೂ ಪರ ಸಂಘಟನೆ ಕಾರ್ಯಕರ್ತರಾದ ಮನೋಜ್, ಕುಮಾರಸ್ವಾಮಿ ಮತ್ತು ವಿಕ್ರಮ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Share Post