Districts

ಕೆಆರ್‌ಎಸ್‌ನಿಂದ ತಮಿಳುನಾಡಿಗೆ 5.3 ಸಾವಿರ ಕ್ಯೂಸೆಕ್‌ ನೀರು ಬಿಡುಗಡೆ

ಮಂಡ್ಯ; ಮುಂಗಾರು ಮಳೆ ಲೇಟಾಗಿದ್ದರಿಂದಾಗಿ ಕೆಆರ್‌ಎಸ್‌ ಅಣೆಕಟ್ಟಿನಲ್ಲಿ ಜೂನ್‌ನಲ್ಲಿ ನೀರಿರಲಿಲ್ಲ. ಇದೀಗ ಜಲಾನಯನ ಪ್ರದೇಶದಲ್ಲಿ ಒಳ್ಳೆಯ ಮಳೆಯಾಗಿದೆ. ಅಣೆಕಟ್ಟೆ ಕೂಡಾ ಬಹುತೇಕ ತುಂಬಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಇಂದು ನೀರು ಬಿಡಲಾಗಿದೆ. ಸುಮಾರು 5308 ಕ್ಯೂಸೆಕ್‌ ನೀರನ್ನು ಕೆಆರ್‌ಎಸ್‌ನಿಂದ ತಮಿಳುನಾಡಿಗೆ ಹರಿಬಿಡಲಾಗಿದೆ.

ತಮಿಳುನಾಡಿಗೆ ನೀರು ಬಿಡಬೇಕಾಗಿರುವುದರಿಂದ ಅವರ ಖೋಟಾ ನೀರುಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನಾಲೆಗಳಿಗೆ ಬಿಡುವ ನೀರನ್ನು ಸ್ಥಗಿತ ಮಾಡಲಾಗಿದೆ. ಕೆಆರ್‌ಎಸ್‌ನಿಂದ ಈಗ 113 ಅಡಿ ನೀರಿದೆ. ಇನ್ನು 11 ಅಡಿ ನೀರು ಬಂದರೆ ಕೆಆರ್‌ಎಸ್‌ ಸಂಪೂರ್ಣ ಭರ್ತಿಯಾಗಿದೆ.

Share Post