Districts

ಬೋಟಿಂಗ್‌ ಉದ್ಘಾಟನೆ ವೇಳೆ ಸಂಸದ ಬಿ.ವೈ.ರಾಘವೇಂದ್ರ ತಲೆಗೆ ಗಾಯ

ಶಿವಮೊಗ್ಗ;  ಶಿವಮೊಗ್ಗ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರು ಬೋಟಿಂಗ್‌ ಉದ್ಘಾಟನೆ ವೇಳೆ ಅವರ ತಲೆಗೆ ಗಾಯವಾಗಿದೆ. ಶಿವಮೊಗ್ಗದ ಸಕ್ರೆಬೈಲಿನಲ್ಲಿ ಈ ಘಟನೆ ನಡೆದಿದೆ. ಸಕ್ರೆಬೈಲಿನಲ್ಲಿ ಹೊಸ ಬೋಟಿಂಗ್ ವ್ಯವಸ್ಥೆ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಿ.ವೈ. ರಾಘವೇಂದ್ರ ಅವರು ಆಗಮಿಸಿದ್ದರು.

ನಂತರ ಬೋಟ್ ಉದ್ಘಾಟನೆ ಮಾಡಿ ಬೋಟ್‍ನಿಂದ ಕೆಳಗೆ ಇಳಿಯುತ್ತಿದ್ದಾಗ ಸ್ಕ್ರೂ ತಗುಲಿದ ಪರಿಣಾಮ ಬಿ.ವೈ. ರಾಘವೇಂದ್ರ ಅವರ ತಲೆಗೆ ಗಾಯವಾಗಿದೆ. ಹೀಗಾಗಿ ಬಿ.ವೈ. ರಾಘವೇಂದ್ರ ಅವರು ಕೂಡಲೇ ಪ್ರಾಥಮಿಕ ಚಿಕಿತ್ಸೆ ಪಡೆದರು.

Share Post