CrimeDistricts

ಪತ್ನಿಯ ನಡತೆಯ ಬಗ್ಗೆ ಅನುಮಾನ; ಗುಂಡಿಕ್ಕಿ ಕೊಂದ ಪಾಪಿ ಪತಿ

ಮಡಿಕೇರಿ; ಪತ್ನಿಯ ಮೇಲೆ ಸಂಶಯಗೊಂಡ ಪತಿ ಒಂಟಿ ನಳಿಕೆ ಕೋವಿಯಿಂದ ಆಕೆಯನ್ನು ಹತ್ಯೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯಲ್ಲಿ ನಡೆದಿದೆ. ಶಶ್ಮಾ ಎಂಬಾಕೆಯೇ ಗಂಡನಿಂದ ಕೊಲೆಯಾದ ಮಹಿಳೆ.

ಚೆಟ್ಟಳ್ಳಿಯ ಬಟ್ಟೀರ ಗೋಪಾಲ ಅಲಿಯಾಸ್ ಕಿಶನ್(53) ಯಾವಾಗಲೂ ತನ್ನ ಪತ್ನಿ ಜೊತೆ ಜಗಳವಾಡುತ್ತಿದ್ದ. ಕಳೆದ ರಾತ್ರಿ ಕೂಡಾ ಪತ್ನಿ ಜೊತೆ ಜಗಳ ಮಾಡಿದ್ದು, ಈ ವೇಳೆ ಒಂಟಿನಳಿಕೆ ಕೋವಿಯಿಂದ ಆಕೆಯ ಎದೆಯ ಭಾಗಕ್ಕೆ ಗುಂಡಿಕ್ಕಿ ಕೊಂಡಿದ್ದಾನೆ. ತಾನೇ ಕೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕಥೆ ಕಟ್ಟಿದ್ದಾನೆ. ಬೆಂಗಳೂರಿನಲ್ಲಿರುವ ತನ್ನ ಮಗ ನಿಧಿ ಹಾಗೂ ಪತ್ನಿಯ ಕುಟುಂಬಸ್ಥರಿಗೆ ಕರೆ ಮಾಡಿ ತಿಳಿಸಿದ್ದಾನೆ.

ಶಶ್ಮಾ ಸಾವಿನ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ನಿನ್ನೆ ರಾತ್ರಿ ಚೆಟ್ಟಹಳ್ಳಿ ಪೋಲೀಸ್ ಉಪಠಾಣೆಗೆ ದೂರು ನೀಡಿದ್ದಾರೆ. ನಂತರ ಮೇಲಾಧಿಕಾರಿಗಳ ಆದೇಶದ ಮೇಲೆ ಎಎಸ್‌ಐ ಪಿ.ಟಿ.ಶ್ರೀನಿವಾಸ್ ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಈ ವೇಳೆ ತಾನೇ ಗುಂಡು ಹಾರಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.

Share Post