CrimeDistricts

ಆಸ್ತಿ ವಿಚಾರವಾಗಿ ಜಗಳ; ನಡುರಸ್ತೆಯಲ್ಲೇ ಮಹಿಳೆಗೆ ಹಿಗ್ಗಾಮುಗ್ಗಾ ಥಳಿತ

ವಿಜಯಪುರ; ಆಸ್ತಿ ವಿಚಾರಕ್ಕೆ ಮಹಿಳೆಯೊಬ್ಬರನ್ನು ನಡು ರಸ್ತೆಯಲ್ಲೇ ಹುಗ್ಗಾಮುಗ್ಗಾ ಥಳಿಸಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಬಳಿಯ ಜಲಪುರದಲ್ಲಿ ನಡೆದಿದೆ. ಮಹಾದೇವಿ ಎಂಬುವವರೇ ಹಲ್ಲೆಗೊಳಗಾದ ಮಹಿಳೆ. 

  ಮಹಾದೇವಿ ಗಂಡನ ಮನೆ ಸುರಪೂರ ತಾಲೂಕಿನ ವಂದಗನೂರ ಗ್ರಾಮ. ಜಲಪುರ ಗ್ರಾಮದಲ್ಲಿ ಇವರಿಗೆ 1 ಎಕರೆ ಜಮೀನಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಗಂಡನ ಜಮೀನಿನಲ್ಲಿ ಮಹಾದೇವಿ ಒಬ್ಬರೇ ಕೆಲಸ ಮಾಡುತ್ತಿದ್ದಾಗ, ಆನಂದ್‌ ಬಿರಾದಾರ ಎಂಬಾತ ಕೈ ಹಿಡಿದು ಎಳೆದಿದ್ದಾನೆ. ಆದ್ರೆ ಮಹಾದೇವಿ ಆತನಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಮನೆಗೆ ಬರುವಾಗ ಆನಂದ್ ಬಿರಾದಾರ, ಶ್ರೀ ಶೈಲ ಬಿರಾದಾರ, ನಾನಾಗೌಡ ಬಿರಾದಾರ ಎಂಬುವರು ಸೇರಿ ಮಹಾದೇವಿ ಮೇಲೆ ಹಲ್ಲೆ ಮಾಡಿದ್ದಾರೆ.

  ಈ ಜಮೀನಿನ ಮೇಲೆ ಹಲ್ಲೆಕೋರರು ಕಣ್ಣಿಟ್ಟಿದ್ದರು ಎನ್ನಲಾಗಿದೆ.

Share Post