Districts

ಕೃಷಿ ಸಚಿವ ಕಾರು ಅಪಘಾತ; ಸಂಸದ ಉಮೇಶ್‌ ಜಾದವ್‌ಗೆ ಗಾಯ..!

ಕಲಬುರಗಿ: ಇಲ್ಲಿನ ರಾಮ ಮಂದಿರ ಸರ್ಕಲ್‌ ಬಳಿ ಕೃಷಿ ಸಚಿವರ ಕಾರು ಹಾಗೂ ಬೆಂಗಾವಲು ಪಡೆ ವಾಹನದ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಸಚಿವ ಕಾರಿನಲ್ಲಿದ್ದ ಸಂಸದ ಉಮೇಶ್‌ ಜಾದವ್‌ ಕೈಗೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

   ಕೃಷಿ ಸಚಿವರ ಕಾರಿನಲ್ಲಿ ಸಂಸದರಾದ ಭಗವಂತ ಕೂಬಾ, ಉಮೇಶ್‌ ಜಾಧವ್‌ ಅವರು ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂದಿನಿಂದ ಬರುತ್ತಿದ್ದ ಬೆಂಗಾವಲು ಪಡೆ ವಾಹನ ಸಚಿವ ಕಾರಿಗೆ ಡಿಕ್ಕಿ ಹೊಡೆದಿದೆ. ಉಮೇಶ್‌ ಜಾಧವ್‌ ಕೂತಿದ್ದ ಕಡೆಯೇ ಡಿಕ್ಕಿ ಹೊಡೆದಿದ್ದರಿಂದ ಸಂಸದರ ಕೈಗೆ ಗಾಯವಾಗಿದೆ. ಎಡಗೈ ಮೂಳೆಗೆ ಸಣ್ಣ ಏಟು ಬಿದ್ದಿದೆ.

ಅಪಘಾತದ ನಂತರ ಆಸ್ಪತ್ರೆಗೆ ತೆರಳಿದ ಸಂಸದ ಉಮೇಶ್‌ ಜಾಧವ್‌ ಅವರು ಚಿಕಿತ್ಸೆ ಪಡೆದು, ಕೈಗೆ ಬ್ಯಾಂಡೇಜ್‌ ಹಾಕಿಸಿಕೊಂಡಿದ್ದಾರೆ.

Share Post