CrimeDistricts

ತುಮಕೂರು ಬಳಿ ಅಪಘಾತ; ಬಾಲಕ ಸಾವು, ಹತ್ತು ಮಂದಿಗೆ ಗಾಯ

ತುಮಕೂರು; ತುಮಕೂರು ಜಿಲ್ಲೆಯಲ್ಲಿ ನಡೆದ ಅಪಘಾತದಲ್ಲಿ ಬಾಲಕನೊಬ್ಬ ಸಾವನ್ನಪ್ಪಿ, ಹತ್ತು ಮಂದಿ ಗಾಯಗೊಂಡಿದ್ದಾರೆ. ಇನ್ನೋವಾ ಕಾರು ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿ ಈ ದುರಂತ ನಡೆದಿದೆ.

ಹದಿನಾಲ್ಕು ವರ್ಷದ ವರ್ಷಿತ್‌ ರೆಡ್ಡಿ ಅಪಘಾತಕ್ಕೆ ಬಲಿಯಾದ ಬಾಲಕ. ಇನ್ನೂ ಹತ್ತು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾವಗಡ ತಾಲ್ಲೂಕಿನ ಟಿ.ಎನ್‌.ಪೇಟೆ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಕಾರು ಪೆನುಗೊಂಡದಿಂದ ಚಿತ್ರದುರ್ಗಕ್ಕೆ ಹೋಗುತ್ತಿತ್ತು. ಆಟೋ ಪಾವಗಡ ಕಡೆಗೆ ಬರುತ್ತಿತ್ತು ಎಂದು ತಿಳಿದುಬಂದಿದೆ.

ಟಿ.ಎನ್‌.ಪೇಟೆ ಗ್ರಾಮದ ಬಳಿ ಆಟೋ ಪ್ರಯಾಣಿಕರನ್ನು ಇಳಿಸಲು ನಿಂತಿತ್ತು. ಈ ವೇಳೆ ಕಾರು ಆಟೋಗೆ ಡಿಕ್ಕಿ ಹೊಡೆದಿದೆ.

 

Share Post