Districts

ದೇವಸ್ಥಾನ ಆವರಣದಲ್ಲಿ ಬರ್ಬರ ಹತ್ಯೆ; ಮಣ್ಣೂರು ಗ್ರಾಮದ ಜನಕ್ಕೆ ಭೀತಿ

ಕಲಬುರಗಿ: ದೇವಸ್ಥಾನ ಆವರಣದಲ್ಲಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿ ಅಫಜಲಪುರ ತಾಲ್ಲೂಕಿನ ಮಣ್ಣೂರು ಗ್ರಾಮದ ದೇವಸ್ಥಾನದ ಆವರಣದಲ್ಲಿರುವ ಯಾತ್ರಿ ನಿವಾಸದ ಬಳಿಯೇ ಈ ಹತ್ಯೆ ನಡೆದಿದೆ. ಭಾಸಗಿ ಗ್ರಾಮದ ನಿವಾಸಿ ನಾಗರಪ್ಪ ರುದ್ನೋಡಗಿ ಎಂಬಾತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. 

  ಕೊಲೆಯಾದ ನಾಗಪ್ಪಗೆ ಇಬ್ಬರು ಪತ್ನಿಯರಿದ್ದಾರೆ. ಐದು ಮಕ್ಕಳನ್ನು ಹೊಂದಿರುವ ನಾಗಪ್ಪ ಮೊದಲ ಪತ್ನಿಯನ್ನು ದೂರ ಮಾಡಿ, ಎರಡನೇ ಪತ್ನಿ ಜೊತೆ ಜೀವಿಸುತ್ತಿದ್ದ. ಇತ್ತೀಚೆಗೆ ಎರಡನೇ ಪತ್ನಿ ತವರು ಮನೆಗೆ ಹೋಗಿದ್ದಳು. ಹೀಗಾಗಿ ಎರಡನೇ ಪತ್ನಿ ನೋಡಲು ಆಕೆಯ ತವರು ಮನೆಗೆ ನಾಗಪ್ಪ ಹೋಗಿದ್ದ. ಈ ವೇಳೆ ಮಾರ್ಗಮಧ್ಯೆ ಈ ಕೊಲೆ ನಡೆದಿದೆ.

ಅಂದಹಾಗೆ ನಾಗಪ್ಪ ಮಹಿಬೂಬ್‌ ಎಂಬಾತನ ಬೈಕ್‌ ಮೇಲೆ ಹೋಗಿದ್ದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇನ್ನು ಸ್ಥಳದಲ್ಲಿ ಮಹಬೂಬ್‌ಗೆ ಸೇರಿದ ಬೈಕ್‌ ಕೂಡಾ ಪತ್ತೆಯಾಗಿದೆ. ಹೀಗಾಗಿ ಮಹಿಬೂಬ್‌ ಎಂಬಾತನೇ ಕೊಲೆ ಮಾಡಿ ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share Post