National

ಹಿಜಾಬ್‌ ವಿಚಾರವಾಗಿ ವಿವಾದಿತ ಹೇಳಿಕೆ; ಕಾಂಗ್ರೆಸ್‌ ಮುಖಂಡ ಮುಕ್ರಂ ಅರೆಸ್ಟ್‌

ಕಲಬುರಗಿ: ಹಿಬಾಬ್‌ ವಿವಾದದ ಸಮಯದಲ್ಲಿ ಹಿಜಾಬ್‌ಗೆ ನಿರ್ಬಂಧ ಹೇರೋಕೆ ಬಂದರೆ ತುಂಡು ತುಂಡು ಮಾಡ್ತೇವೆ ಎಂದು ವಿವಾದಿತ ಹೇಳಿಕೆ ನೀಡಿದ್ದ ಕಲಬುರಗಿಯ ಕಾಂಗ್ರೆಸ್‌ ಮುಖಂಡ ಮುಕ್ರಂ ಖಾನ್‌ರನ್ನು ಕೊನೆಗೂ ಬಂಧಿಸಲಾಗಿದೆ. ವಿವಾದಿತ ಹೇಳಿಕೆ ನೀಡಿದ್ದ ಮುಕ್ರಂ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಆದ್ರೆ ಅಂದಿನಿಂದ ಮುಕ್ರಂ ಅವರು ತಲೆಮರೆಸಿಕೊಂಡಿದ್ದರು.

   ಪ್ರಚೋದನೆ ನೀಡುವಂತಹ ಹೇಳಿಕೆ ನೀಡಿದ್ದ ಮುಕ್ರಂ ಖಾನ್‌ ಬಂಧನದ ಭೀತಿಯಿಂದ ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದರು. ಮಾಹಿತಿ ಅರಿತ ಪೊಲೀಸರು ಹೈದರಾಬಾದ್‌ನಲ್ಲಿ ಮುಕ್ರಂ ಖಾನ್‌ ಬಂಧಿಸಿದ್ದಾರೆ. ಈ ವೇಳೆ ಅವರಿಗೆ ಅನಾರೋಗ್ಯ ಉಂಟಾಗಿದ್ದು, ಅವರನ್ನು ಹೈದರಾಬಾದ್‌ನ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಸೇಡಂ ಪಟ್ಟಣದ ನಿವಾಸಿಯಾದ ಮುಕ್ರಂ ಖಾನ್‌, ಹಿಜಾಬ್‌ ಪರವಾಗಿ ನಡೆ ಪ್ರತಿಭಟನೆ ವೇಳೆ ಇಂತಹ ಹೇಳಿಕೆ ನೀಡಿದ್ದರು. ಹಿಜಾಬ್‌ ವಿಚಾರಕ್ಕೆ ಬಂದರೆ ತುಂಡು ತುಂಡು ಮಾಡುತ್ತೇವೆ ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದರು.

Share Post