DistrictsPolitics

ಕಲ್ಲು ತೂರಾಟ ಪ್ರಕರಣ; ಚೇತರಿಸಿಕೊಳ್ಳುತ್ತಿರುವ ಜಿ.ಪರಮೇಶ್ವರ್

ತುಮಕೂರು;‌ ನಿನ್ನೆ ಕೊರಟಗೆರೆ ಕ್ಷೇತ್ರದ ಹಳ್ಳಿಯೊಂದರಲ್ಲಿ ರೋಡ್‌ ಶೋ ನಡೆಸುತ್ತಿದ್ದ ವೇಳೆ ಕಿಡಿಗೇಡಿಯೊಬ್ಬ ತೂರಿದ ಕಲ್ಲಿನಿಂದ ಗಾಯಗೊಂಡಿದ್ದ ಮಾಜಿ ಡಿಸಿಎಂ ಜಿ.ಪರಮೇಶ್ವರ್‌ ಈಗ ಚೇತರಿಸಿಕೊಳ್ಳುತ್ತಿದಾರೆ. ನಿನ್ನೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಪರಮೇಶ್ವರ್‌ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಈಗ ಅವರು ತಮ್ಮ ನಿವಾಸದಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ.

ಘಟನೆ ನಡೆದ ಕೂಡಲೇ ಪರಮೇಶ್ವರ್‌ ಅವರಿಗೆ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಅನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚೇತರಿಸಿಕೊಂಡ ಅವರು ಮನೆಗೆ ಮರಳಿದ್ದಾರೆ. ವೈದ್ಯರ ತಂಡವೊಂದು ಪರಮೇಶ್ವರ್‌ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದೆ. ನಿನ್ನೆ ಭೈರೇನಹಳ್ಳಿಯಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದರು.

Share Post