Districts

ಬೀಗರ ಬುತ್ತಿ ಸೇವಿಸಿ 40ಮಂದಿ ಅಸ್ವಸ್ಥ: ವಾಂತಿ, ಭೇದಿಯಿಂದ ಆಸ್ಪತ್ರೆ ಪಾಲಾದ ಜನ

ಕೊಪ್ಪಳ: ಬೀಗರ ಬುತ್ತಿ ಸವಿದ ಬಳಿಕ ವಾಂತಿ, ಭೇದಿಯಿಂದ 40ಜನ ಆಸ್ಪತ್ರೆ ಪಾಲಾದ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹುಲೇಗುಡ್ಡದಲ್ಲಿ ನಡೆದಿದೆ. ಹುಲೇಗುಡ್ಡದಲ್ಲಿ ರಾತ್ರಿ ಆಹಾರ ಸೇವಿಸಿ ನಲವತ್ತು ಮಂದಿ ಅಸ್ವಸ್ಥರಾಗಿದ್ದಾರೆ. ಒಂದು ವಾರದ ಹಿಂದೆ ಕುಷ್ಟಗಿಯಲ್ಲಿ ಮದುವೆಯಾಗಿತ್ತ. ಎರಡೂ ಕಡೆ ಮನೆಯವರು ನಿನ್ನೆ ಬೀಗರ ಬುತ್ತಿ ತಂದು ಊಟ ಮಾಡಿದ್ರು.

ಊಟ ಮಾಡಿದ ಬಳಿಕ ಸುಮಾರು 40 ಜನರಿಗೆ ವಾಂತಿ ಭೇದಿಯಾಗಿದೆ. ಅಸ್ವಸ್ಥರಾದವರಿಗೆ ಯಲಬುರ್ಗಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ಅಸ್ವಸ್ಥಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಸ್ಥಳಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಯಲಬುರ್ಗಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post