Bengaluru

ಕೋರ್ಟ್‌ ಆದೇಶ ಧಿಕ್ಕರಿಸಿದ್ದಕ್ಕೇ ಹೀಗಾಗಿದೆ, ವಿರೋಧ ಮಾಡುವುದಾದ್ರೆ ಪಾಕಿಸ್ತಾನಕ್ಕೆ ಹೋಗಿ-ರೇಣುಕಾಚಾರ್ಯ

ಬೆಂಗಳೂರು: ರಾಜ್ಯದಲ್ಲಿ ಭುಗಿಲೆದ್ದಿರುವ ಹಲಾಲ್‌ ಹಾಗೂ ಜಟ್ಕಾಕಟ್‌ ಬಗ್ಗೆ ವಿಧಾನಸೌಧದಲ್ಲಿ ಚರ್ಚೆಯಾಗಿದೆ. ಈ ಬಗ್ಗೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಲಯದ ಆದೇಶ ವಿರೋಧ ಮಾಡಿದ್ದಕ್ಕೆ ಈ ರೀತಿ ಆಗಿದೆ ಎಂದಿದ್ದಾರೆ. ಹಿಜಾಬ್‌ ಆದೇಶ ವಿರೋಧ ಮಾಡಿದ್ದರಿಂದ ಈ ಅಭಿಯಾನ ಶುರುವಾಗಿದೆಯೆಂದು ರೇಣುಕಾಚಾರ್ಯ ಹೇಳಿದ್ರು.

ಇವರು ವಿರೋಧ ಮಾಡುವುದಾದರೆ ಪಾಕಿಸ್ತಾನಕ್ಕೆ ಹೋಗಿ ಮಾಡಲಿ. ಇಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಕೋವಿಡ್‌ ಸಮಯದಲ್ಲಿ ಹಣ್ಣಿಗೆ ಎಂಜಲು ಹಾಕಿ ಮಾರಾಟ ಮಾಡಿದ್ದಾರೆ. ಹಲಾಲ್‌ ಕಟ್‌ ಮಾಡಿದ್ದನ್ನು ಹಿಂದೂಗಳು ತಿನ್ನಬೇಕಾ..?ಅವರಿಗೆ ಅವರ ಧರ್ಮ ಮುಖ್ಯ ಆದ್ರೆ…ನಮಗೆ ನಮ್ಮ ಧರ್ಮ ಮುಖ್ಯ. ಮಾಂಸದ ಅಂಗಡಿ ತೆರೆಯುವ ಹಿಂದೂ ಯುವಕರಿಗೆ ಬೆಂಬಲ ನೀಡುವುದಾಗಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

Share Post