Districts

ಮತಾಂತರ ನಿಷೇಧ ಕಾಯ್ದೆಗೆ ವಿರೋಧಬೇಡ-ಯಡಿಯೂರಪ್ಪ

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ರೂಪಿಸಿರುವ ಉದ್ದೇಶದಿಂದ ಮಂಡಿಸಲಿರುವ ಮಸೂದೆಯನ್ನು ಯಾವುದೆ ಕಾರಣಕ್ಕೂ ವಿರೋಧಿಸಬೇಡಿ. ರಾಜ್ಯದ ಜನರ ಹಿತದೃಷ್ಟಿಯಿಂದ ಕಾಯ್ದೆ ತರಲಾಗುತ್ತಿದೆ ಎಂದು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರಿಗೆ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಮನವಿ ಮಾಡಿದರು.
ಈ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಲು ಸಹಕಾರ ನೀಡಬೇಕು. ಜನರನ್ನು ಭಾವನಾತ್ಮಕವಾಗಿ ಹಿಡಿದಿಟ್ಟುಕೊಳ್ಳಲು ಈ ಕಾಯ್ದೆ ಜಾರಿಗೆ ತರುತ್ತಿಲ್ಲ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದೆ. ಹೀಗಾಗಿ ನಮ್ಮಲ್ಲೂ ಕೂಡ ಈ ಕಾಯ್ದೆಯನ್ನು ಜಾರಿಗೆ ತರೋಣವೆಂದು ಹೇಳಿದರು.

 

Share Post