CrimeDistricts

ಮದುವೆಗೆ ಒಪ್ಪದ ಪ್ರಿಯತಮೆ!; ನೇಣಿಗೆ ಶರಣಾದ ಪಾಗಲ್ ಪ್ರೇಮಿ!

ರಾಯಚೂರು; ಪ್ರೀತಿಸಿದ ಹುಡುಗಿ ಮದುವೆಗೆ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಕನಸಾವಿ ಎಂಬಲ್ಲಿ ಈ ಘಟನೆ ನಡೆದಿದೆ.. ಮನೆಯಲ್ಲೇ ಸಂತೋಷ್ ಎಂಬಾತ ನೇಣಿಗೆ ಶರಣಾಗಿದ್ದಾನೆ..

  ಸಂತೋಷ ತನ್ನ ಅಣ್ಣನ ಪತ್ನಿಯ ತಂಗಿಯನ್ನು ಪ್ರೀತಿಸುತ್ತಿದ್ದ.. ಆದ್ರೆ ಆಕೆ ಅದಕ್ಕೆ ಒಪ್ಪಿಲ್ಲ.. ಹೀಗಾಗಿ, ನಾನು ಒಬ್ಬ ಹುಚ್ಚು ಪ್ರೇಮಿ, ನಾನು ಸತ್ತರೂ ಪ್ರೀತಿಗಾಗಿ ಎಂದು ವಾಟ್ಸಪ್ಪ್ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

  ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share Post