CrimeDistricts

ನಡು ರಸ್ತೆಯಲ್ಲೇ ಯುವಕನ ಬರ್ಬರ ಕೊಲೆ; ಕಲ್ಲಿಂದ ಹೊಡೆದು ಭೀಕರ ಹತ್ಯೆ

ಬೆಳಗಾವಿ; ಬೆಳಗಾವಿಯಲ್ಲಿ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಬೆಳಗಾವಿಯ ಶಿವಬಸವನಗರದಲ್ಲಿ ಕಳೆದ ರಾತ್ರಿ ಈ ಕೃತ್ಯ ಎಸಗಲಾಗಿದ್ದು, ಸಿಸಿಟಿಯಲ್ಲಿ ಕೊಲೆಯ ದೃಶ್ಯ ದಾಖಲಾಗಿದೆ. ರಾಮನಗರ ನಿವಾಸಿ ನಾಗರಾಜ್ ಗಾಡಿವಡ್ಡರ್ (26)  ಕೊಲೆಯಾದ ದುರ್ದೈವಿಯಾಗಿದ್ದಾರೆ.

ನಾಗರಾಜ್‌ ಅವರು ಕಳೆದ ತಡರಾತ್ರಿ ಶಿವಬಸವಬನಗರದಲ್ಲಿ ಹೋಗುತ್ತಿದ್ದಾಗ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದಿರುವ ದುಷ್ಕರ್ಮಿಗಳು, ಅವರನ್ನು ಅಡ್ಡಹಾಕಿದ್ದಾರೆ. ನಂತರ ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮೂವರು ದುಷ್ಕರ್ಮಿಗಳಿಂದ ಈ ಕೃತ್ಯ ಎಸಗಲಾಗಿದೆ.

ಕೊಲೆ ನಂತರ ಮೂವರೂ ಆರೋಪಿಗಳು ಒಂದೇ ಕಡೆ ಹೋಗದೆ ದಿಕ್ಕಿಗೆ ಒಬ್ಬರಂತೆ ಪರಾರಿಯಾಗಿದ್ದಾರೆ. ಐದಾರು ಬಾರಿ ಕಲ್ಲಿನಿಂದ ಹೊಡೆದು ಸಾಯಿಸಲಾಗಿದ್ದು, ಬೈಕ್‌ನಲ್ಲಿ ಬಂದ ಮೂವರಲ್ಲಿ ಮಧ್ಯದಲ್ಲಿ ಕುಳಿತಿದ್ದ ವ್ಯಕ್ತಿ ಈ ಕೃತ್ಯ ಎಸಗಿದ್ದು, ಇತರ ಇಬ್ಬರು ಕೊಲೆಗೆ ಸಾಥ್‌ ನೀಡಿದ್ದಾರೆ. ಪೊಲೀಸರು ಆರೋಪಿಗಳಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

Share Post