CrimeDistricts

ಪತ್ನಿ ತಲೆ ಜಜ್ಜಿ ಕೊಲೆ; ನವ ವಿವಾಹಿತನ ಪಾಪಿ ಕೆಲಸಕ್ಕೆ ಕಾರಣವೇನು?

ರಾಯಚೂರು; ಮದುವೆಯಾಗಿ ಇನ್ನೂ ನಾಲ್ಕು ತಿಂಗಳಾಗಿತ್ತು.. ಇನ್ನೂ ಒಬ್ಬರಿಗೊಬ್ಬರು ಅರ್ಥವೇ ಆಗಿರಲಿಲ್ಲ.. ಆಗಲೇ ಮನಸ್ತಾಪ ಬಂದಿದೆ.. ಅದು ವಿಕೋಪಕ್ಕೆ ತಿರುಗಿ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳವವರೆಗೂ ಬಂದಿದೆ.

  ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ದಿದ್ದಿಗಿ ಗ್ರಾಮದಲ್ಲಿ ನವ ವಿವಾಹಿತನೊಬ್ಬ ಪತ್ನಿಯನ್ನು ಕಲ್ಲಿನಿಂದ ಜಜ್ಜಿ  ಕೊಲೆ ಮಾಡಿದ್ದಾನೆ. ಅನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕವಿತಾ(26) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ‌ ನಂತರ ಆಕೆಯ ಪತಿ ಭೀಮಣ್ಣ (29) ನೇಣಿಗೆ ಶರಣಾಗಿದ್ದಾರೆ. 2023ರ ಡಿಸೆಂಬರ್ ನಲ್ಲಷ್ಟೇ ಇವರ ಮದುವೆ ನಡೆದಿತ್ತು ಎಂದು ತಿಳಿದುಬಂದಿದೆ.

  ಇಂದು ಬೆಳಗ್ಗೆ ಇಬ್ಬರೂ ಜಮೀನಿಗೆ ಹೋಗಿದ್ದರು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದೆ. ಅದು ವಿಕೋಪಕ್ಕೆ ತಿರುಗಿ ಕೊಲೆ ಮಾಡಲಾಗಿದೆ. ನಂತರ ಆರೋಪಿ ಜಮೀನಿನಲ್ಲಿರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.

Share Post