DistrictsPolitics

ಬಿಜೆಪಿ ಸರ್ಕಾರ ಅಧಿಕಾರಿಗಳಿಂದ ಕಲೆಕ್ಷನ್ ದಂದೆಗೆ ನಿಂತಿದೆ; ಶಾಸಕ ಭೀಮಾನಾಯ್ಕ್

ವಿಜಯನಗರ; ಬಿಜೆಪಿ ಸರ್ಕಾರ ಅಧಿಕಾರಿಗಳಿಂದ ಕಲೆಕ್ಷನ್ ದಂದೆ ನಡೆಸುತ್ತಿದೆ ಇದಕ್ಕೆಲ್ಲಾ ನನ್ನ ಬಳಿ ದಾಖಲೆಗಳಿವೆ ಎಂದು ಹಗರಿಬೊಮ್ಮನಳ್ಳಿ ಶಾಸಕ ಕಾಂಗ್ರೇಸ್ ಶಾಸಕ ಭೀಮಾನಾಯ್ಕ್ ಗಂಭೀರ ಆರೋಪ ಮಾಡಿದ್ದಾರೆ.

ಬೂತ್ ಮಟ್ಟದ ಪದಾಧಿಕಾರಿಗಳ ಸಭೆ ಮುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಭೀಮಾನಾಯ್ಕ್ ಬಿಜೆಪಿ ಸರ್ಕಾರ ವರ್ಗಾವಣೆ ದಂದೆ, ಅಧಿಕಾರಿಗಳ ಬಳಿ ಕಲೆಕ್ಷನ್ ದಂದೆ ನಡೆಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂದೆ ನಡೆಸುತ್ತಿರುವ ಬಿಜೆಪಿ ಸರ್ಕಾರ ಹಗರಿಬೊಮ್ಮನಹಳ್ಳಿ ಸಿಪಿಐ ಮಂಜುನಾಥ್ ಎಷ್ಟು ಕೊಟ್ರು ಪೇಮೆಂಟ್, ಪಿಎಸ್ಐ ಮಂಜುನಾಥ್ ಎಷ್ಟು ಕೊಟ್ರು, ಮರಿಯಮ್ಮನಹಳ್ಳಿ ಪಿಎಸ್ಐ 12 ಲಕ್ಷ ಪೇಮೆಂಟ್ ಯಾರಿಗೆ ಕೊಟ್ರು ಸಾಕ್ಷೀ ಬೇಕಾ ಎಂದಿದ್ದಾರೆ.

ಜೊತೆಗೆ ತಹಶೀಲ್ದಾರ್ ಮಹಿಳೆ ಶರಣಮ್ಮಗೆ ಹಗರಿಬೊಮ್ಮನಹಳ್ಳಿ ಇರುವುದಕ್ಕೆ ಎಷ್ಟು ಹಣ ಡಿಮ್ಯಾಂಡ್ ಮಾಡಿದ್ದೀರಿ, 15 ಲಕ್ಷ ಹಣ ಕೊಟ್ರೆ ಇಲ್ಲೆ ಇರ್ಬೇಕು ಇಲ್ಲಾಂದ್ರೆ ಜಾಗ ಖಾಲಿ ಮಾಡ್ಬೇಕು. ಅನಿಲ್ ತಹಶೀಲ್ದಾರ್ ಕಡೆ ಎಷ್ಟು ಹಣ ಡಿಮ್ಯಾಂಡ್ ಮಾಡಿದ್ರಿ, ಈಗ ತಂದಿದ್ದೀರಿ ಅಲ್ಲಾ ಆನಂದಪ್ಪ ಬಿಇಓ ಅವರ ಕಡೆ ಎಷ್ಟು ಪೇಮೆಂಟ್ ತಗೊಂಡ್ಡಿದ್ದೀರಾ ಅಂತಾ ಹೇಳ್ಬೇಕಾ ಎಂದು ಸವಾಲು ಹಾಕಿದರು.

ನಾನು ಒಂಬತ್ತು ವರ್ಷದ ಅವಧಿಯಲ್ಲಿ ಶಾಸಕನಾಗಿ ಈಗ ಹೇಳಿದ ಇಲಾಖೆಯಲ್ಲಿ ಒಂದು ರೂಪಾಯಿ ತಗೊಂಡಿದ್ರೆ ರಾಜಕೀಯ ನಿವೃತ್ತಿ ಹೊಂದುತ್ತೆನೆ ಎಂದರು. ನಾವು ಟ್ರಾನ್ಸಫರ್ ಗಿರಾಕಿ ಅಲ್ಲಾ, ಕ್ಷೇತ್ರದ ಜನತೆಯ ಸೇವೆ ಮಾಡಲು ಬಂದಿದ್ದೇವೆ ಎಂದರು.

Share Post