Crime

ರಸ್ತೆ ಅಪಘಾತ:ಏಳು ಮಂದಿ ದುರ್ಮರಣ

ಚಿತ್ತೂರು: ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 7 ಮಂದಿ ಸಾವಿಗೀಡಾದ ಅಮಾನುಷ ಘಟನೆ, ಚಿತ್ತೂರು ಜಿಲ್ಲೆ ಚಂದ್ರಗಿರಿ ಸಮೀಪ ನಡೆದಿದೆ. ಶ್ರೀಕಾಕುಳಂ ಹಾಗೂ ವಿಜಯನಗರ ಜಿಲ್ಲೆಗೆ ಸೇರಿದ ಒಂದೇ ಕುಟುಂಬದ ಎಂಟು ಮಂದಿ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುತ್ತಿದ್ದರೆಂಬ ಮಾಹಿತಿಯಿದೆ. ಮಾರ್ಗಮಧ್ಯೆ ಆಟೋ ತಪ್ಪಿಸಲು ಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಸಮಯದಲ್ಲಿ ಕಾರು 13o ಕಿಮೀ ವೇಗದಲ್ಲಿತ್ತು  ಎನ್ನಲಾಗಿದೆ. ಡಿಕ್ಕಿ ಹೊಡೆದ ಪರಿಣಾಮ ಇಂಜಿನ್‌ನಲ್ಲಿ ಆಯಿಲ್‌ ಲೀಕ್‌ ಆಗಿ ಅಗ್ನಿ ಆವರಿಸಿದೆ.  ದುರಂತದಲ್ಲಿ ಸುರೇಶ್‌ ಕುಮಾರ್‌ , ಪತ್ನಿ ಮೀನಾ ಮಗಳು  ನಂದಿತ, ತಂದೆ ಶ್ರೀರಾಮಮೂರ್ತಿ, ತಾಯಿ ಸತ್ಯವತಿ, ಮಾವ ಗೋವಿಂದರಾವ್‌, ಅತ್ತೆ ಹೇಮಾವತಿ, ಸಾವನ್ನಪ್ಪಿರುವಾದಿಗೆ ತಿಳಿದುಬಂದಿದೆ, ಸಂಪೂರ್ಣ ಗಾಯಗೊಂಡಿದ್ದ 2 ವರ್ಷದ ಪುಟಾಣಿ ಜೋಷ್ಮಿತಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಪೋಸ್ಟ್‌ಮಾಟಂಗಾಗಿ ಅನಂತಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು.

Share Post