CrimePolitics

ವಿಜಯ್‌ ತಾತಾಗೆ ವಂಚನೆ ಆರೋಪ; ಕುಮಾರಸ್ವಾಮಿಗೆ ಕಾನೂನು ಸಂಕಷ್ಟ!

ಬೆಂಗಳೂರು; ರಿಯಲ್‌ ಎಸ್ಟೇಟ್‌ ಉದ್ಯಮಿ ವಿಜಯ್‌ ತಾತಾ ದೂರಿನ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿಗೆ ಕಾನೂನು ಸಂಕಷ್ಟ ಎದುರಾಗಿದೆ.. ಉಪಚುನಾವಣೆಗಾಗಿ 50 ಕೋಟಿ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ಉದ್ಯಮಿ ವಿಜಯ್‌ ತಾತಾ ಆರೋಪ ಮಾಡಿದ್ದಯ, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ..
ವಿಜಯ್‌ ತಾತಾ ದೂರಿನಿಂದ ಹಿನ್ನೆಲೆಯಲ್ಲಿ ಪೊಲೀಸರು ಬಿಎನ್​ಎಸ್ ಸೆಕ್ಷನ್ 3(5), 308(2), 351(2) ಅಡಿಯಲ್ಲಿ ಕೇಸ್‌ ದಾಖಲು ಮಾಡಿದ್ದರು.. ಇದರಲ್ಲಿ 308 ಬಿಎನ್ಎಸ್ ಸೆಕ್ಷನ್​ ಸುಲಿಗೆಗೆ ಸಂಬಂಧಿಸಿದ್ದಾಗಿದ್ದು, ಇದು ನಾನ್ ಬೇಲಬಲ್ ಸೆಕ್ಷನ್ ಸೆಕ್ಷನ್‌.. ಹೀಗಾಗಿ ದೂರು ದಾಖಲಾದ ಏಳು ದಿನಗಳಲ್ಲಿ ವಿಚಾರಣೆ ನೋಟಿಸ್‌ ನೀಡಬೇಕಾಗುತ್ತದೆ.. ವಿಚಾರಣೆ ಬರದೆ ಹೋದರೆ ಬಂಧನ ಮಾಡುವ ಸಾಧ್ಯತೆ ಕೂಡಾ ಇರುತ್ತದೆ.. ಈ ಪ್ರಕರಣದ ಸಂಬಂಧ ಪೊಲೀಸರು ಕುಮಾರಸ್ವಾಮಿಯವರಿಗೆ ನೋಟಿಸ್‌ ನೀಡುವ ಸಾಧ್ಯತೆ ಇದೆ..
ಇನ್ನು ವಿಜಯ್‌ ತಾತಾ ದಾಖಲು ಮಾಡಿರುವ ಕೇಸ್‌ ಪ್ರಶ್ನೆ ಮಾಡಿ ಕುಮಾರಸ್ವಾಮಿ ಹೈಕೋರ್ಟ್‌ ಮೊರೆಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. ಸದ್ಯ ಕುಮಾರಸ್ವಾಮಿಯವರು ದೆಹಲಿಯಲ್ಲಿದ್ದು, ಬೆಂಗಳೂರಿಗೆ ವಾಪಸ್‌ ಆದ ಮೇಲೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.. ಅಮೃತಹಳ್ಳಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ..

Share Post