CrimeDistricts

ಟಿಟಿ ವಾಹನ ದುರಂತ; ಆ ಮನೆಯಲ್ಲಿ ಬದುಕುಳಿದಿದ್ದು ಈ ಯುವತಿ ಮಾತ್ರ!

ಶಿವಮೊಗ್ಗ; ಹಾವೇರಿ ಜಿಲ್ಲೆ ಬ್ಯಾಡಗಿ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟವರು ಶಿವಮೊಗ್ಗ ಜಿಲ್ಲೆ ಭದ್ರಾವತಿ ಬಳಿಯ ಎಮ್ಮಿಹಟ್ಟಿ ಗ್ರಾಮದವರು.. ನಾಗೇಶರಾವ್‌ ಎಂಬುವವರು ಒಂದೂವರೆ ತಿಂಗಳ ಹಿಂದಷ್ಟೇ ಟಿಟಿ ವಾಹನ ಖರೀದಿ ಮಾಡಿದ್ದರು.. ಹೀಗಾಗಿ ಮನೆದೇವರಿಗೆ ಪೂಜೆ ಮಾಡಿಸಿಕೊಂಡು ಬರಲು ಸವದತ್ತಿಗೆ ಹೋಗಿದ್ದರು.. ವಾಪಸ್‌ ಬರುವಾಗ ಹಾವೇರಿ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ 13 ಮಂದಿ ಸಾವನ್ನಪ್ಪಿದ್ದಾರೆ.. ನಾಗೇಶ ರಾವ್‌ ಮನೆಯಲ್ಲಿ ವಿಕಲಚೇತನ ಯುವತಿ ಬಿಟ್ಟು ಉಳಿದವರೆಲ್ಲಾ ಸಾವನ್ನಪ್ಪಿದ್ದಾರೆ..

ಟಿಟಿ ವಾಹನದ ಮಾಲೀಕ ನಾಗೇಶ ರಾವ್‌ ಹಾಗೂ ತಾಯಿ ವಿಶಾಲಾಕ್ಷಿ ಸೇರಿ ಅವರ ಮನೆಯ ನಾಲ್ವರು ಸಾವನ್ನಪ್ಪಿದ್ದಾರೆ. ಆಶಾ ಕಾರ್ಯಕರ್ತೆ ವಿಶಾಲಾಕ್ಷಿ ಮನೆಯಲ್ಲಿ ವಿಕಲ ಚೇತನ ಯುವತಿ ಬಿಟ್ಟು ಇನ್ನುಳಿದವರೆಲ್ಲ ಸಾವನ್ನಪ್ಪಿದ್ದಾರೆ. ವಿಶಾಲಾಕ್ಷಿ ಪುತ್ರಿ ಹುಟ್ಟಿನಿಂದ ಪೋಲಿಯೋ ರೋಗಕ್ಕೆ ತುತ್ತಾಗಿದ್ದು, ಆಕೆ ಮಾತ್ರ ಈಗ ಬದುಕುಳಿದಿದ್ದಾಳೆ.. ಸುಭದ್ರಬಾಯಿ (65), ಮಾನಸ (29), ಮಂಜುಳಾ (50), ಆದರ್ಶ (21), ಆರ್ಯ (4), ವಿಶಾಲಾಕ್ಷಿ (50), ರೂಪಾ ಬಾಯಿ (35), ನಂದನ (3), ಅಂಜಲಿ (30), ನಾಗೇಶ ರಾವ್ (51), ಅರುಣಕುಮಾರ (27), ಮಂಜುಳಾ ಬಾಯಿ (55), ಭಾಗ್ಯ ಬಾಯಿ (45) ಮೃತಪಟ್ಟಿದ್ದಾರೆ.

Share Post