BengaluruCrime

ರೈಲ್ವೆ ಟ್ರ್ಯಾಕ್ ನಲ್ಲಿ ಮೂವರು ಯುವಕರ ದಾರುಣ ಸಾವು; ಕಾರಣ ನಿಗೂಢ?

ಬೆಂಗಳೂರು; ರೈಲಿಗೆ ಸಿಲುಕಿ ಮೂವರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.. ಮಾರತ್ತಹಳ್ಳಿ ರೈಲು‌‌ನಿಲ್ದಾಣದ ಬಳಿ ಈ ದುರ್ಘಟನೆ ನಡೆದಿದೆ.. ಮೊದಲಿಗೆ ಆತ್ಮಹತ್ಯೆ ಎಂದು ಭಾವಿಸಲಾಗಿತ್ತು.. ಆದ್ರೆ ಇದು ಆಕಸ್ಮಿಕವಾಗಿ ನಡೆದ ರೈಲು ಅಪಘಾತ ಎಂದು ತಿಳಿದುಬಂದಿದೆ..

 ಆಂಧ್ರ ಪ್ರದೇಶದ ಚಿತ್ತೂರು ಮೂಲದ ಶಶಿಕುಮಾರ್(23) ಲೋಕೇಶ್ (25) ಮತ್ತೋರ್ವ ಸಾವನ್ನಪ್ಪಿದ್ದಾನೆ.. ರೈಲು‌ ಹೋಗುವಾಗ ಮೂವರೂ ನಡೆದುಕೊಂಡು ಹೋಗುತ್ತಿದ್ದರು. ಟ್ರ್ಯಾಕ್ ಪಕ್ಕ ಕಿರಿದಾದ ಜಾಗವಿದ್ದು ಅಲ್ಲಿ ನಡೆದುಕೊಂಡು ಹೋಗುವಾಗ ಕಣ್ಣೂರು-ಯಶವಂತಪುರ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ..

  ರೈಲ್ವೆ ಟ್ರ್ಯಾಕ್ ಅಕ್ಕಪಕ್ಕ ಅಪಾರ್ಟ್ ಮೆಂಟ್ ಗಳಿವೆ.. ಅಲ್ಲಿಗೆ ಹತ್ತಿರವಾಗುತ್ತದೆಂದು ನಿಷೇಧಿತ ಪ್ರದೇಶದಲ್ಲಿ ಯುವಕರು ರೈಲಿದು ನಡೆದುಕೊಂಡು ಹೋಗುತ್ತಿದ್ದರು.. ಈ ವೇಳೆ ದುರಂತ ನಡೆದಿದೆ ಎಂದು ತಿಳಿದುಬಂದಿದೆ.

 

Share Post