BengaluruCrime

ಶಂಕಿತ ಉಗ್ರನಿಗೆ ಮೊಬೈಲ್‌ ನೀಡಿದ್ದಾತನ ವಶ; ಬೆಂಗಳೂರಲ್ಲೂ ವ್ಯಕ್ತಿಯೊಬ್ಬನ ವಿಚಾರಣೆ

ಬೆಂಗಳೂರು; ಮಂಗಳೂರಿನ ಆಟೋದಲ್ಲಿ ಕುಕ್ಕರ್‌ ಸ್ಫೋಟ ಪ್ರಕರಣ ಸಂಬಂಧ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ಪ್ರಕರಣ ಸಂಬಂಧ ಬೆಂಗಳೂರಿನಲ್ಲೂ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಬೆಂಗಳೂರು ಪೂರ್ವ ವಲಯ ಪೊಲೀಸರು ಮಹಮ್ಮದ್‌ ರುಹುಲ್ಲಾ ಎಂಬಾತನನ್ನು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಇನ್ನೊಂದೆಡೆ ಮೈಸೂರಿನಲ್ಲಿ ಆರೋಪಿ ಶಾರೀಖ್‌ ವಾಸವಿದ್ದ ಕಾರಣ ಅಲ್ಲಿ ತೀವ್ರ ತನಿಖೆ ನಡೆಯುತ್ತಿದೆ. ಮೈಸೂರಿನಲ್ಲಿ ಶಂಕಿತ ಉಗ್ರ ಶಾರೀಖ್‌ಗೆ ಮೊಬೈಲ್‌ಗಳನ್ನು ನೀಡಿದ್ದ ಅಂಗಡಿ ಮಾಲೀಕ ಹಾಗೂ ಅಂಗಡಿಯಲ್ಲಿದ್ದ ನೌಕರನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಇವರನ್ನು ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಇನ್ನು ಶಿವಮೊಗ್ಗ ಗಲಭೆ ಹಾಗೂ ಮಂಗಳೂರಿನಲ್ಲಿ ನಡೆದ ಬ್ಲಾಸ್ಟ್‌ಗೂ ಇಂಟರ್‌ ಲಿಂಕ್‌ ಇದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತನಿಖೆ ಮತ್ತಷ್ಟು ತೀವ್ರಗೊಳಿಸಲಾಗಿದೆ. ಇನ್ನೊಂದಡೆ ಎನ್‌ಐಎ ಅಧಿಕಾರಿಗಳು ಕೂಡಾ ತನಿಖೆಗೆ ಸಾಥ್‌ ನೀಡುತ್ತಿದ್ದಾರೆ. ನಿನ್ನೆ ಮೂರು ಬಾರಿ ಆರೋಪಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿದ್ದರು. ನಾಲ್ವರು ಎನ್‌ಐಎ ಅಧಿಕಾರಿಗಳು ಆಟೋ ಚಾಲಕನಿಂದ ಒಂದಷ್ಟು ಮಾಹಿತಿ ಪಡೆದಿದ್ದಾರೆ.

Share Post