CrimeDistricts

ಯುವಕನನ್ನು ಶೆಡ್‌ಗೆ ಕರೆಸಿ ಕೊಲೆ ಮಾಡಿ ಕಾರಿನ ಜೊತೆ ಬೆಂಕಿ ಇಟ್ಟರು!

ಹಾವೇರಿ; ಇಷ್ಟಪಟ್ಟ ಹುಡುಗಿ ಜೊತೆ ಮದುವೆ ಮಾಡಿಸುವುದಾಗಿ ಯುವಕನನ್ನು ಶೆಡ್‌ಗೆ ಕರೆಸಿ, ಕಾರು ಸಮೇತ ಆತನನ್ನು ಸುಟ್ಟು ಬೂದಿ ಮಾಡಿರುವ ಪ್ರಕರಣಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ.. ಈ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಹಾವೇರಿ ಜಿಲ್ಲೆ ಹಾನಗಲ್‌ ಠಾಣೆ ಪೊಲೀಸರು, ಏಳು ಜನ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ..

ಇದನ್ನೂ ಓದಿ; ಅಂಬಾನಿ ಪುತ್ರನ ಮದುವೆಯಲ್ಲಿ ಹೊಸ ಲುಕ್‌ನಲ್ಲಿ ಕಂಡ ನಟ ಯಶ್‌

ಮಾರ್ಚ್ 15ರಂದು ಶಿವಮೊಗ್ಗದ ಗಾಡಿಕೊಪ್ಪದ ವೀರೇಶ ಎಂಬಾತನ ಕೊಲೆ ನಡೆದಿತ್ತು.. ಈತ ದೂರದ ಸಂಬಂಧಿಯಾದ ಅಕ್ಕಿ ಆಲೂರಿನ ಯುವತಿಯನ್ನು ಪ್ರೀತಿಸುತ್ತಿದ್ದ.. ಈ ವಿಷಯ ತಿಳಿದ ಯುವತಿಯ ಅಣ್ಣಂದಿರು. ಮದುವೆ ಮಾಡಿಸುತ್ತೇವೆ ಎಂದು ವೀರೇಶನನ್ನು ಕರೆಸಿಕೊಂಡಿದ್ದರು.. ಗೋವಿನ ಜೋಳದ ವ್ಯಾಪಾರಸ್ಥರಾಗಿದ್ದ ಹುಡುಗಿಯ ಅಣ್ಣಂದಿರು, ವೀರೇಶ್‌ನನ್ನು ಶೆಡ್‌ಗೆ ಕರೆಸಿಕೊಂಡು ಅಲ್ಲಿ ಮಚ್ಚುಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು.. ಅನಂತರ ಮೃತದೇಹವನ್ನು ಕಾರಿನಲ್ಲಿ ತೆಗೆದುಕೊಂಡು ಹೋಗಿ ಶಿವಮೊಗ್ಗದ ಶಿರಾಳಕೊಪ್ಪ ಠಾಣೆ ವ್ಯಾಪ್ತಿಯ ತೊಗರ್ಸಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾರಿನ ಸಮೇತ ಸುಟ್ಟು ಹಾಕಿದ್ದರು..

ಇದನ್ನೂ ಓದಿ; ಡೆತ್‌ ನೋಟ್‌ ಬರೆದ ತೆಲುಗು ನಟ ರಾಜ್‌ ತರುಣ್‌ ಪ್ರೇಯಸಿ!; ಮುಂದೇನಾಯ್ತು..?

ಪೊಲೀಸರು ಪ್ರಕರಣದ ಬೇಧಿಸುವಲ್ಲಿ ಯಶಸ್ವಿಯಾಗಿದ್ದರು.. ಯುವತಿಯ ಇಬ್ಬರು ಸಹೋದರರು, ತಂದೆ- ಚಿಕ್ಕಪ್ಪ ಹಾಗೂ ಮೂವರು ಕಾರ್ಮಿಕರು ಈ ಪ್ರಕರಣದಲ್ಲಿ ಪಾಲ್ಗೊಂಡಿದ್ದರು.. ಇವರೆಲ್ಲರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ..

 

Share Post